ಧಾರವಾಡ : ಇವತ್ತು ಬೆಳಗ್ಗೆ ಮತ್ತೆ ಅಬ್ಬರಿಸಿದ ವರುಣ ಧಾರವಾಡ ಜಿಲ್ಲೆಯ ಜನಜೀವನವನ್ನೇ ಅಸ್ತವ್ಯಸ್ತ ಮಾಡಿದೆ. ಧಾರವಾಡ ನಗರದ ಹಾವೇರಿಪೇಟ ಬಡಾವಣೆ, ಶುಕ್ಲಾ ವಠಾರ, ಕಂಠಿಗಲ್ಲಿ ಸೇರಿದಂತೆ ಹತ್ತಾರು ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಶುಕ್ಲಾ ವಠಾರದ 9 ಮನೆಗಳಿಗೆ ಅಕ್ಷರಶಃ ಜಲದಿಗ್ಬಂಧನವಾಗಿತ್ತು.
ಇನ್ನು ಧಾರವಾಡ ತಾಲೂಕಿನ ಮುಗದ ಗ್ರಾಮದ ಬಳಿ ಹೊಲಗಳೇ ಕೆರೆಯಂತಾಗಿವೆ. ಹಳ್ಳಗಳು ಭೋರ್ಗರೆಯುತ್ತಿರೋದ್ರಿಂದ ಕುಂದಗೋಳ ತಾಲೂಕಿನ ಮೂರು ಗ್ರಾಮಗಳಿಗೆ ಸಂಪರ್ಕ ಕಡಿತವಾಗಿದೆ. ಬ್ರಿಡ್ಜ್ ಮುಳುಗಡೆಯಾಗಿ ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಚಿಕ್ಕನರ್ತಿ, ಹಿರೆನರ್ತಿ, ಯರಗುಪ್ಪಿ ಗ್ರಾಮಗಳ ಸಂಪರ್ಕ ಕಡಿತವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

