ಹುಬ್ಬಳ್ಳಿ: ಈ ಹಿಂದೆ ಹುಬ್ಬಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಂದ್ರೆ ಗುಟಕಾ ವಿಚಾರ, ಸಿಗರೇಟ್ ವಿಚಾರ, ಬಾಡಿಗೆ ವಿಚಾರಕ್ಕೆ ಚಾಕು ಇರಿತ ಆಗಿದ್ದು ಹುಬ್ಬಳ್ಳಿಯ ಜನರಿಗೆ ಏನು ಆಗ್ತಾ ಇದೆ ಅನ್ನೋದು ದಿಕ್ಕು ತೋಚದಂತಾಗಿತ್ತು.
ಇನ್ನು ನಿನ್ನೆ ರಾತ್ರಿಯೂ ಕೂಡ ಹಿಂತದೆ ಕಾರಣಕ್ಕೆ ಒಬ್ಬ ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಲಾಗಿದೆ.
ಯಶವಂತ್ ಭಂಡಾರಿ ಅನ್ನೋ ಯುವಕನನಿಗೆ ಅಭಿಷೇಕ್ ಜಾಧವ್ ಮತ್ತು ಆತನ ಸಹಚರರು ಸೆರೆ ಹಲ್ಲೆ ಮಾಡಿದ್ದಾರೆ.
ಹೋಟೆಲ್ ಒಂದರಲ್ಲಿ ಊಟಕ್ಕೆ ಹೋದಾಗ ಯಶ್ವಂತ್ ಹಾಗೂ ಅಭಿಷೇಕ್ ನಡುವೆ ಗುರಾ ಗುರಿ ನೋಡುವ ಕಾರಣಕ್ಕೆ ಇದೆ ಒಂದು ನೆಪ ಇಟ್ಟುಕೊಂಡು ಕುಡಿದ ಮತ್ತನಲ್ಲಿದ್ದ ಅಭಿಷೇಕ್ ಯಶ್ವಂತ್ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ, ಯಶ್ವಂತ್ ಅಭಿಷೇಕನನ್ನು ಒಂದ್ ಏರಡು ಕೊಟ್ಟು ಕಳಿಸಿದ್ದಾನೆ, ಆದರೆ ಅಭಿಷೇಕ್ ಹೊಡೆತ ತಿಂದ ಕಾರಣಕ್ಕೆ ಮತ್ತೆ ತನ್ನ ಸಹಚರರೊಂದಿಗೆ ಆಟೋದಲ್ಲಿ ಬಂದು ಏಕಾ ಏಕಿ ಯಶ್ವಂತ್ ಮೇಲೆ ಬಾಟಲ್ ಹಾಗೂ ತಲವಾರಿನಿಂದ ಹಲ್ಲೆ ಮಾಡಿದ್ದಾನೆ.
ಅದೃಷ್ಟಶಾತ್ ಸ್ಥಳೀಯರು ಜಗಳದ ಸ್ಥಳಕ್ಕೆ ಬಂದಾಗ ಅಭಿಷೇಕ್ ಆ್ಯಂಡ್ ಕಂಪನಿ ಅಲ್ಲಿದ್ದ ಕಾಲ್ಕಿತ್ತಿದ್ದಾರೆ.
ಹಲ್ಲೆಗೆ ಒಳಗಾದ ಯಶ್ವಂತ್ ಸ್ಥಳೀಯರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಕಸಬಾಪೇಟೆ ಪೊಲೀಸ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಂಡಿದ್ದಾರೆ.