ಧಾರವಾಡ: ಪಡಿತರ ಅಕ್ಕಿ ನರೇಂದ್ರ ಮೋದಿಯವರದ್ದೆಂಬ ವಿಚಾರವಾಗಿ ಸಂತೋಷ ಲಾಡ್ ಪ್ರತಿಕ್ರಿಯೆ ನೀಡಿದ್ದಾರೆ. ಧಾರವಾಡದಲ್ಲಿ ಇಂದು ಮಾತನಾಡಿದ ಸಚಿವ ಸಂತೋಷ ಲಾಡ್
ನರೇಂದ್ರ ಮೋದಿ ಅಕ್ಕಿ ಎಂದು ಹೇಳುತ್ತಿದ್ದಾರೆ ಆದರೆ ಅದು ನರೇಂದ್ರ ಮೋದಿ ಅಕ್ಕಿ ಅಲ್ಲ
ಅದು ಯು.ಪಿ.ಎ. ಸರಕಾರ ನೀಡಿರುವ ಅಕ್ಕಿ
ಯುಪಿಎ 2 ಸರ್ಕಾರ ಆಡಳಿತದಲ್ಲಿ ಇದ್ದ ವೇಳೆಯಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದಾರೆ ಭಾರತ ದೇಶದಲ್ಲಿ ಈ ಕಾಯ್ದೆ ಮೂಲಕ 5 ಕೆಜಿ ಅಕ್ಕಿಯನ್ನು ಕೊಟ್ಟಿದ್ದೇವೆ
1 ಲಕ್ಷ 10 ಸಾವಿರ ಕೋಟಿ ಅಕ್ಕಿ ಇಟ್ಟಿದ್ದು ಯು.ಪಿ.ಎ.ಸರಕಾರ
ಅಷ್ಟು ಅಕ್ಕಿ ಸಂಗ್ರಹ ಮಾಡಿ ಇಟ್ಟು 5 .ಕೆ.ಜಿ. ಅಕ್ಕಿ ಕೊಡಲು ಆರಂಭ ಮಾಡಿದ್ದು ನಾವು ಹೀಗಾಗಿ ಅದು ಮೋದಿ ಕೊಡುತ್ತಿರುವ ಅಕ್ಕಿ ಅಲ್ಲ
ಅದು ಸರ್ಕಾರದ ಅಕ್ಕಿ
10 ಕೆಜಿ ಅಕ್ಕಿಯನ್ನು ನಾವು ಕೊಡುತ್ತೇವೆ ಎಂದು ಹೇಳಿದ್ವಿ
ಕೇಂದ್ರದ 5 ಕೆಜಿಗೆ ನಾವು 5ಕೆಜಿ ಸೇರಿಸಿ 10 ಕೆಜಿ ಎಂದು ಹೇಳಿದ್ವಿ
ಅದರಂತೆ 10 ಕೆಜಿ ಅಕ್ಕಿಯನ್ನು ಕೊಟ್ಟೆ ಕೊಡುತ್ತೇವೆ.
ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ತಿಳಿಸಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news





