ಧಾರವಾಡ: ಹರೀಶ್ ಮೆಡಿ ಲ್ಯಾಬ್ ಇದು ರಕ್ತ ತಪಾಸಣಾ ಕೇಂದ್ರವಾಗಿದ್ದು, ನಿನ್ನೆ ರಾತ್ರಿ ಸಿಬ್ಬಂದಿ ಲ್ಯಾಬ್ಗೆ ಕೀಲಿ ಹಾಕಿಕೊಂಡು ಹೋದ ತಕ್ಷಣ ರಾತ್ರೋರಾತ್ರಿ ಕಳ್ಳರು ಆ ಲ್ಯಾಬ್ನ ಬಾಗಿಲು ಮುರಿದು ಒಳನುಗ್ಗಿದ್ದಾರೆ.
ಲ್ಯಾಬ್ನಲ್ಲಿ ಹಣಕ್ಕಾಗಿ ಖದೀಮರು ಹುಡುಕಾಡಿದ್ದಾರೆ. ಆದರೆ, ಅವರಿಗೆ ಹಣ ಸಿಕ್ಕಿಲ್ಲ. ಆಯುಧ ಪೂಜೆಗೆಂದು ದೇವರ ಮುಂದೆ ಇಟ್ಟಿದ್ದ ಚಿಲ್ಲರೆ ಹಣವನ್ನು ಖದೀಮರು ಎಗರಿಸಿ ಲ್ಯಾಬ್ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಳ್ಳರ ಈ ಚಲನವಲನ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

