ಹುಬ್ಬಳ್ಳಿ : ಕರ್ನಾಟಕ ರಾಜ್ಯ ಸರ್ಕಾರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನ್ವಯವಾಗಿ, ಚರ್ಮಕಾರರಿಗೆ ಅವರ ಜನಸಂಖ್ಯೆಯ ಅನುಸಾರವಾಗಿ ಪ್ರತ್ಯೇಕ ಒಳಮೀಸಲಾತಿ ಸೇರಿ ಎಲ್ಲಾ ಸವಲತ್ತುಗಳನ್ನು ನೀಡಬೇಕೆಂದು ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘ ಒತ್ತಾಯಿಸುತ್ತದೆಂದು ಮಹಾಮಂಡಳದ ಅಧ್ಯಕ್ಷ ಗುರುನಾಥ ಉಳ್ಳಿಕಾಶಿ ಹೇಳಿದರು.
ಇನ್ನು ಮೂಲ ಚರ್ಮಕಾರರ ಸುಮಾರು 15 ಲಕ್ಷ ಜನಸಂಖ್ಯೆ ಇರುವ ಈ 18 ಕ್ಕೂ ಹೆಚ್ಚಿನ ಚಮ್ಮಾರ ಸಮಗಾರ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸಬೇಕು. ಚರ್ಮಕಾರ ಸುಮಾರು 18 ಸಮುದಾಯಗಳನ್ನು ತಕ್ಷಣ ಮಾದಿಗ ಜಾತಿಗಳ ಪಟ್ಟಿಯಿಂದ ಪ್ರತ್ಯೇಕಿಸಬೇಕು, ಸಮುದಾಯದ ಸಮಗ್ರ ಏಳೆಗಾಗಿ ಒಂದು ಪ್ರತ್ಯೇಕ ನಿಗಮ ಮಂಡಳಿಯನ್ನು ಸ್ಥಾಪಿಸಬೇಕು ಇಲ್ಲವೇ ಡಾ. ಬಾಬುಜಗಜೀವನ್ ರಾಮ್ ಚರ್ಮಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಕಡ್ಡಾಯವಾಗಿ ಚಮ್ಮಾರ ಸಮಗಾರ ಸಮಾಜಕ್ಕೆ ಪ್ರತ್ಯೇಕಿಸಬೇಕೆಂದು ಒತ್ತಾಯಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

