ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ವಿರುದ್ಧ ಭೂ ಒತ್ತುವರಿ ಆರೋಪ ಕೇಳಿ ಬಂದ ಹಿನ್ನೆಲೆ ಒತ್ತುವರಿ ತೆರವು ಮಾಡುವಂತೆ ಹೈಕೋರ್ಟ್ ಖಡಕ್ ಸೂಚನೆ ನೀಡಿತ್ತು. ಇಂದು ಕಂದಾಯ ಇಲಾಖೆ ತೆರವು ಕಾರ್ಯಾಚರಣೆ ಮಾಡಿದ್ದಾರೆ. ಕುಮಾರಸ್ವಾಮಿ ಅವರ ಬಿಡದಿ ತೋಟದ ಮನೆಯಲ್ಲಿ ಜೆಸಿಬಿ ಘರ್ಜಿಸಿದೆ. ಪ್ರಕರಣ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್ಐಟಿ ರಚನೆ ಮಾಡಿದ್ದರು. ಕುಮಾರಸ್ವಾಮಿ ಮೇಲೆ ಆರೋಪ ಮಾಡಲು ಬೇರೆ ಕಾರಣಗಳಿಲ್ಲ.ಕುಮಾರಸ್ವಾಮಿಗೆ ಇನ್ನೂ ಮೂರು ಎಕರೆ ಜಮೀನು ಬಿಡಬೇಕು.
ಕುಮಾರಸ್ವಾಮಿಯವರನ್ನ ಕರೆದು ದಾಖಲೆ ಪರಿಶೀಲಿಸಬೇಕುಅದನ್ನ ಬಿಟ್ಟು ಏಕಾಏಕಿ ತೆರವು ಮಾಡುವುದು ಎಷ್ಟು ಸರಿ,ಇದರ ಹಿಂದೆ ಸರ್ಕಾರದ ಯಾರು ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ಜೆಡಿಎಲ್ಪಿ ನಾಯಕ ಸಿ.ಬಿ.ಸುರೇಶ್ ಬಾಬು ಕಿಡಿಕಾರಿದ್ರು.
bigtvnews | Hubli Dharwad News | Kannada News | Karnataka News Hubli News | News In Hubli | Local news

