ಸ್ವಯಂಘೋಷಿತ ದೇವಮಾನ ನಿತ್ಯಾನಂದ ಮೃತಪಟ್ಟಿಲ್ಲ ಸುರಕ್ಷಿತವಾಗಿದ್ದಾರೆ ಅವರ ನಿಧನದ ಸುದ್ದಿ ವದಂತಿ ಅಷ್ಟೇ ಎಂದು ಕೈಲಾಸ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಿತ್ಯಾನಂದ ಮೃತಪಟ್ಟಿರುವುದಾಗಿ ಅವರ ಸೋದರಳಿಯ ಸಂದೇಶ್ವರ್ ತಿಳಿಸಿದರು. ಆ ಬಳಿಕ ನಿತ್ಯಾನಂದ ಸಾವಿನ ಸುದ್ದಿ ವೈರಲ್ ಆಗಿತ್ತು. ನಿತ್ಯಾನಂದ ಬಗ್ಗೆ ಅಪಪ್ರಚಾರ ಮಾಡಲು ಈ ಸುದ್ದಿಯನ್ನು ಹರಿ ಬಿಡಲಾಗಿದೆ ಎಂದು ಕೈಲಾಸ ತಿಳಿಸಿತ್ತು. ಇದೇ ವೇಳೆ ಮಾರ್ಚ್ 30ರಂದು ಯುಗಾದಿ ಸಂಭ್ರಮದಲ್ಲಿ ನಿತ್ಯಾನಂದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ ವಿಡಿಯೋ ಬಿಡುಗಡೆ ಆಗಿತ್ತು. 2019ರಲ್ಲಿ ಭಾರತ ಬಿಟ್ಟು ಹೋದ ನಿತ್ಯಾನಂದ ಕೈಲಾಸ ದೇಶವನ್ನು ನಿರ್ಮಿಸಿದ್ದಾಗಿ ತಿಳಿಸಿದರು. ಇಕ್ವೇಡ್ ಆರ್ ಕರಾವಳಿಯಲ್ಲಿ ಜಮೀನನ್ನು ಕರೆದಿಸಿ ಕೈಲಾಸ ಎಂಬ ದೇಶವನ್ನು ಸೃಷ್ಟಿಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

