16 ವರ್ಷಗಳ ಹಿಂದೆ ಕೆಹರ್ ಸಿಂಗ್ ಎಂಬುವವನನ್ನು ಮದುವೆಯಾಗಿದ್ದ ಆರೋಪಿ ರೇಖಾಗೆ ನಾಲ್ವರು ಮಕ್ಕಳಿದ್ದು, ಇತ್ತೀಚೆಗೆ ಪಿಂಟು ಎಂಬಾತನೊಂದಿಗೆ ರೇಖಾ ಲವ್ನಲ್ಲಿ ಬಿದ್ದಿದ್ದಾಳಂತೆ. ಈ ವಿಚಾರಕ್ಕೆ ಗಂಡನ ನಡುವೆ ಆಗಾಗ ಗಲಾಟೆಯೂ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.ತನ್ನ ಪ್ರೇಮಕ್ಕೆ ಅಡ್ಡಿಯಾದ ಗಂಡನ ಕಥೆ ಮುಗಿಸಬೇಕೆಂದು ಸಂಚು ರೂಪಿಸಿದ್ದ ರೇಖಾ, ಪತಿಗೆ ಭಾನುವಾರ ರಾತ್ರಿ ವೇಳೆ ಟೀನಲ್ಲಿ ಇಲಿ ವಿಷ ಬೆರೆಸಿ ನೀಡಿದ್ದಾಳೆ. ಬಳಿಕ ತನ್ನ ಲವರ್ ನನ್ನು ಮನೆಗೆ ಕರೆಸಿ ಗಂಡನ ಕುತ್ತಿಗೆಗೆ ಹಗ್ಗ ಬಿಗಿದು ದೇಹವನ್ನು ಫ್ಯಾನಿಗೆ ನೇತು ಹಾಕಿದ್ದಾರೆ. ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಅತ್ತು-ಕರೆದು ನಾಟಕವಾಡಿದ್ದಾಳೆ. ಮೃತನ ಕುಟುಂಬಸ್ಥರ ದೂರಿನಡಿ ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಇದು ಆತ್ಮಹತ್ಯೆಯಲ್ಲ ಕೊಲೆ ಎಂಬುವುದಾಗಿ ಕೆಹರ್ ಸಿಂಗ್ನ ಪೋಸ್ಟ್ ಮಾರ್ಟಮ್ ರಿಫೋರ್ಟ್ನಿಂದ ಆಂಟಿಯ ಅಸಲಿಯತ್ತನ್ನು ಬಯಲಿಗೆಳೆದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

