ಗ್ರಾಮದ ಜನರಿಗೆ ಕುಡಿಯುವ ನೀರಿಗಾಗಿ ಸರ್ಕಾರದಿಂದ ಎಂಟು ಕೊಳವೆ ಬಾವಿ ಕೊರೆಸಲಾಗಿದೆ. ಕೆರೆಯ ಕೋಡಿಯನ್ನು ಸಹ ಸರ್ಕಾರದಿಂದಲೇ ನಿರ್ಮಾಣ ಮಾಡಲಾಗಿದೆ. ₹20 ಲಕ್ಷ ನರೇಗಾ ಕಾಮಗಾರಿಯು ನಡೆದಿದೆ. ಇತ್ತೀಚೆಗೆ ಜಲ ಜೀವನ್ ಯೋಜನೆ ಅಡಿಯಲ್ಲಿ ಕೊಳವೆ ಬಾವಿಯನ್ನು ಕೊರೆಸಲಾಗಿದೆ. ಇಷ್ಟ ಸರ್ಕಾರ ಕಾಮಗಾರಿ ನಡೆದಿರುವ ಜಾಗವನ್ನು ಕೆಲವರು ತಮ್ಮದೆಂದು ಮಾರಾಟಕ್ಕೆ ಯತ್ನಿಸಿರುವುದು ಅಪರಾಧ ಎಂದು ಗ್ರಾಮ ಪಂಚಾಯಿತಿ ಸದಸ್ಯ ಶಾಂತರಾಜು ದೂರಿದರು.ಕೆರೆಯಲ್ಲಿ ಸರ್ವೆ ನಂಬರ್ 22, 23,24,25 ಖಾಸಗಿ ಖಾತೆದಾರರ ಹೆಸರಿನಲ್ಲಿ ಬರುತ್ತಿರುತ್ತವೆ. ಕೆಲವು ಖಾಸಗಿ ವ್ಯಕ್ತಿಗಳು ಮಾರಾಟ ಮಾಡಲು ಮುಂದಾಗಿದ್ದಾರೆ. ಈ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿ ಕೊಡಬೇಕು ಎಂದು ಒತ್ತಾಯಿಸಿದರು.ತಾಲ್ಲೂಕಿನ ಹೊಸೂರು ಹೋಬಳಿಯ ಬಳಗೆರೆ ಗ್ರಾಮದ ಕೆರೆಯ ಜಾಗವನ್ನು ಮಾರಾಟಕ್ಕೆ ಯತ್ನಿಸಿದ ಕೆಲವು ಖಾಸಗಿ ವ್ಯಕ್ತಿಗಳ ವಿರುದ್ಧ ಗುರುವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

