ಕೇ0ದ್ರ ಕಾರಾಗೃಹದಿಂದ ತಪ್ಪಿಸಿಕೊಂಡ ಸೌಮ್ಯಾ ಕೊಲೆ ಪ್ರಕರಣದ ಅಪರಾಧಿಯನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸಿದ್ದಾರೆ. ಗೋವಿಂದಚಾಮಿ ಸೆರೆಯಾದ ಅಪರಾಧಿ. ಈತ ಕಣ್ಣೂರು ನಗರದ ಡಿಸಿಸಿ ಕಚೇರಿ ಸಮೀಪದ ಖಾಲಿ ಕಟ್ಟಡದ ಬಳಿಯ ಬಾವಿಯಲ್ಲಿ ಅಡಗಿದ್ದ.ಸ್ನಿಫರ್ ನಾಯಿ ಸೇರಿದಂತೆ ಪೊಲೀಸ್ ತಂಡ ಆ ಪ್ರದೇಶಕ್ಕೆ ತಲುಪಿತು. ಅಪರಾಧಿ ಅಡಗಿರುವ ಪಾಳುಬಿದ್ದ ಕಟ್ಟಡ ಪರಿಶೀಲಿಸಿತು. ಸ್ಥಳೀಯರು ನೀಡಿದ ಮಾಹಿತಿಯ ಆಧಾರದ ಮೇಲೆ ಪೊಲೀಸರು ಆ ಪ್ರದೇಶದಲ್ಲಿ ತೀವ್ರ ಶೋಧ ನಡೆಸಿ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

