Breaking News
Featured Video Play Icon

ಕೊಲೆ ಪ್ರಕರಣ: ಪೊಲೀಸರಿಂದ 5 ಲಕ್ಷ ಬೇಡಿಕೆ ಆರೋಪ!” ಆರಕ್ಷಕರೇ ಭಕ್ಷಕರಾದ್ರ ಹುಬ್ಬಳ್ಳಿಲಿ…?!!.

ಈ ಬಗ್ಗೆ ಒಂದು ಆಡಿಯೋ ಎಲ್ಲೆಡೆ ಸಂಚಲನ ಮೂಡಿಸಿದೆ….

ಹುಬ್ಬಳ್ಳಿಯ ನವನಗರದಲ್ಲಿ ಚರ್ಚೆಗೆ ಈಡಾದ ಘಟನೆ ಒಂದು ನಡೆದಿದ್ದು ಕೊಲೆ ಪ್ರಕರಣದ ಆರೋಪ ದಡಿ 5 ಲಕ್ಷ ಬೇಡಿಕೆ ಇಟ್ಟಿದ್ದು ಪೊಲೀಸರ ಮೇಲೆ ಕುಟುಂಬದವರು ಗಂಭೀರ ಆರೋಪ ಮಾಡಲಾಗಿದೆ. ಪೇದೆ ಅವರ ವಿರುದ್ಧ ಆರೋಪ ಮಾಡಲಾಗಿದ್ದು ಕುಟುಂಬಗಳ ಪ್ರಕಾರ ಮುಂಗಡಣೆಯಾಗಿ 2 ಲಕ್ಷ ಹಣ ನೀಡಿದ್ದು,. ಮತ್ತೆ 3 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ನಮ್ಮ ಯಾವ ಕೈವಾಡ ಇಲ್ಲ ಎಂದು ಕುಟುಂಬ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಆರು ತಿಂಗಳ ಹಿಂದಿನ ಕೊಲೆಯಾಗಿದ್ದು, ಮಂಜುನಾಥ್ ಜಾದವ್ ಅವರನ್ನು ಮೂರನೇ ಪತ್ನಿ ಮತ್ತು ಮಧು ಹಿರೇಮಠ ಹಾಗೂ ಇತರರು ಸೇರಿ ಕೊಲೆ ಮಾಡಿದ ಪ್ರಕರಣ ಆಗಿರುತ್ತದೆ ಹೆಣ ಸಾಗಿಸಲು ಗಾಡಿ ಒಂದನ್ನು ಬಾಡಿಗೆ ಪಡೆದು ಶವ ಸಾಗಿಸಲಾಗಿತ್ತು. ಕೊಲೆ ಪ್ರಕರಣವನ್ನು ಯಾವುದೇ ರೀತಿ ಬಗೆಹರಿಸದೆ ಇದ್ದು ನಾವು ಹಣಕ್ಕಾಗಿ ಸಾಲ ಮಾಡಿ ನೊಂದಿದ್ದೇವೆ ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರು A 4ಇದ್ದಂತ ಆರೋಪವನ್ನು A2 ಗೆ ತಂದು ಇನ್ನಷ್ಟು ಗೊಂದಲ ತಂದಿಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

Share News

About Shaikh BigTv

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *