ನೆಲಮಂಗಲ: ಬೆಂಗಳೂರಿನ ಆಟೋ ನಾಗ (32) ಎಂಬ ರೌಡಿಶೀಟರನನ್ನು ದುಷ್ಕರ್ಮಿಗಳು ಭೀಕರವಾಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನೆಲಮಂಗಲ ಬಳಿಯ ಬಾಲಾಜಿ ಫಾರಂ ಹೌಸ್ನಲ್ಲಿ ನಡೆದಿದೆ. ಈತನ ಮೇಲೆ ಕ್ರಿಮಿನಲ್ ಆರೋಪಗಳು ಇದ್ದ ಹಿನ್ನಲೆ ರೌಡಿಶೀಟ್ ತೆರೆಯಲಾಗಿತ್ತು. ಆದ್ರೆ ಇಂದು (ಜ.25) ನೆಲಮಂಗಲದ ಬಳಿಯ ಬಾಲಾಜಿ ಫಾರಂ ಹೌಸ್ನ ರೂಮ್ನಲ್ಲಿ ಈತನ್ನಿ ಕೊಚ್ಚಿ ಕೊಲೆ ಮಾಡಿಯುವ ಆರೋಪಿಗಳು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಈತನ ವಿರುದ್ಧ ಆರೋಪಗಳು ದಾಖಲಾಗಿದ್ದ ಕಾರಣ ಲಗ್ಗೆರೆ ಮತ್ತು ಹುಲಿಯೂರು ದುರ್ಗ ಪೊಲೀಸ್ ಠಾಣೆಯಲ್ಲಿ ಆಟೋ ನಾಗ ಮೇಲೆ ರೌಡಿಶೀಟ್ ಓಪನ್ ಆಗಿತ್ತು. ಇನ್ನು ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

