ಸಾಗರ: ಇಲ್ಲಿನ ನೆಹರು ನಗರದ ನವಾಯತ್ ಕಾಲೋನಿಯ ಮನೆಯೊಂದರಲ್ಲಿ ಸುಮಾರು 24 ಕೆಜಿ ಗೋಮಾಂಸ ಪತ್ತೆಯಾಗಿದೆ. ಪೇಟೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ವೀಳ್ಯದೆಲೆ ಮಾರಾಟ ಮಾಡುವ ಎಲೆ ಫಾರೂಕ್ ಎಂಬುವವರ ಮನೆಯಲ್ಲಿ ದನದ ಮಾಂಸ ಸಿಕ್ಕಿದೆ.
ನೆಹರು ನಗರದ ಅವರ ಮನೆಯಲ್ಲಿ ಭದ್ರಾವತಿಯಿಂದ ಅಥವಾ ಶಿವಮೊಗ್ಗದ ತುಂಗಾ ನಗರದಿಂದ 80 ಕೆಜಿ ದನದ ಮಾಂಸ ತರಿಸಿ ಮಾರಾಟ ಮಾಡುತ್ತಿದ್ದ ಎಂಬ ಖಚಿತ ಮಾಹಿತಿಯನ್ನು ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಭದ್ರಾವತಿ ಮೂಲದ ವ್ಯಕ್ತಿಯಿಂದ ಈ ಮಾಂಸ ತರಿಸಿ ಆರೋಪಿ ಸಾಗರದಲ್ಲಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಖಚಿತ ಮಾಹಿತಿ ಆಧಾರದ ಮೇರೆಗೆ ಬೆಳಗ್ಗೆಯಿಂದ ಕಣ್ಣಿಟ್ಟಿದ್ದ ಪೊಲಿಸರು, ಸಂಜೆಯ ನಂತರ ಜನ ಬಂದು ಖರೀದಿಸುತ್ತಿದ್ದಾಗ ದಾಳಿ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

