Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ಮಗುವನ್ನು ಕೊಂದ ತಾಯಿ ಹಾಗೂ ಪ್ರೀಯಕರನ ಬಂಧನ

ಅನೈತಿಕ
ಸಂಬಂಧ ಹಿನ್ನೆಲೆಯಲ್ಲಿ ಮಗುವನ್ನು ಕೊಲೆ ಮಾಡಿ ‌ಮೃತ
ದೇಹವನ್ನು ಕಿಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ ಮಗುವಿನ ಹೆತ್ತ ತಾಯಿ ಹಾಗೂ ಪ್ರಿಯಕರನನ್ನು
ಬಂಧಿಸುವಲ್ಲಿ ಗೋಕುಲ್ ರೋಡ್ ಠಾಣೆ ಪೊಲೀಸರು
ಯಶಸ್ವಿಯಾಗಿದ್ದಾರೆ. ದಾದಾಪೀರ್ ಹಾಗೂ ಪೂಜಾ ಬಂಧಿತ ಆರೋಪಿಗಳಾಗಿದ್ದಾರೆ. ಅನೈತಿಕ ಸಂಬಂಧಕ್ಕೆ ಮಗುವನ್ನು ಕೊಂದು ನಂತರ ಮಗುವಿಗೆ ಜ್ವರ ಬಂಧಿದೆ ಎಂದು ಕಿಮ್ಸ್ ಆಸ್ಪತ್ರಗೆ
ಕರೆದುಕೊಂಡು ಬಂದಿದ್ದರು. ಆದ್ರೆ ವೈಧ್ಯರು ಚಿಕಿತ್ಸೆ ಕೊಡಲು ಮುಂದಾದಾಗ ಮಗು ಸತ್ತು ಹೋಗಿರುವುದು
ವೈದ್ಯರಿಗೆ ತಿಳಿದು ಬಂದಿದೆ. ನಂತರ ಪ್ರೀಯಕರರು ಮಗು ಸತ್ತ ವಿಷಯ ತಿಳಿಯುದ್ದಂತೆ ಮಗುವಿನ ಡೆಡ್ ಬಾಡಿ ಬಿಟ್ಟು ಎಸ್ಕೇಪ್ ಆಗಿದ್ದರು.

ಅಷ್ಟಕ್ಕೂ
ಮಗುವಿನ ಕೊಲೆಗೆ ಕಾರಣ ನೋಡುವುದಾದ್ರೇ ಕಳೆದ ಎಂಟು
ವರ್ಷಗಳ ಹಿಂದೆ ಬೆಳಗಾವಿಯ ರಾಜು ತಾಳೂರಕರ್ ಗೆ ಪೂಜಾಳನ್ನು ಕೊಟ್ಟು ಮದುವೆ ಮಾಡಲಾಗಿತ್ತು.
ಆದ್ರೆ ದಾದಾಪೀರ್ ಜೊತೆ ಅನೈತಿಕ‌ ಸಂಬಂಧ ಹೊಂದಿದ್ದು,. ಕಳೆದ ಒಂದು ತಿಂಗಳ ಹಿಂದೆ ಗಂಡನ ಮನೆ ಬಿಟ್ಟು ಪ್ರಿಯಕರನ ಜೊತೆ
ವಾಸವಿದ್ದಳು. ಮೃತ ಮಗು, ರಾಜು ತಾಳೂಕರ್ ಗೆ ಹುಟ್ಟಿದೆ ಎಂಬ ಕಾರಣಕ್ಕೆ ಆಗಾಗ ಈ ಮಗು ಇರಬಾರದು ಎಂದು ದಾದಾಪೀರ ಮಗುವಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆ. 20 ರಂದು ದೊಣ್ಣೆಯಿಂದ ಮಗುವಿನ ತಲೆಗೆ ಹೊಡೆದು ಕೊಂದು ಆನಂತರ
ಆಸ್ಪತ್ರೆಗೆ ಸೇರಿಸುವ ನಾಟಕವಾಡಿ ಕೊನೆಗೆ ಕಾಲ್ಕಿತ್ತಿದ್ದರು. ಕೊನೆಗೂ ಒಂದು ವಾರದ ನಂತರ
ದಾದಾಪೀರ್ ಹಾಗೂ ಪೂಜಾಳನ್ನ ನೂತನ ಆಯುಕ್ತರಾದ ಆರ್ ದೀಲೀಪ್ ಅವರ ನೇತೃತ್ವದಲ್ಲಿ ಗೋಕುಲ್ ರೋಡ್
ಪೊಲೀಸರು ಬಂಧಿಸಿದ್ದಾರೆ.

Share News

About Shaikh BIG TV NEWS, Hubballi

Check Also

ಬೆಂಗಳೂರಲ್ಲಿ ಮತ್ತೊಂದು ಭೀಕರ ಮರ್ಡರ್ : ಹೆತ್ತ ತಾಯಿಯ ಕತ್ತು ಸೀಳಿ ಕೊಂದ ಪಾಪಿ ಮಗ.!

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಹತ್ಯ ನಡೆದಿದ್ದು, ಮಗನೊಬ್ಬ ತನ್ನ ಹೆತ್ತ ತಾಯಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ನಡೆದಿದೆ.ಬೆಂಗಳೂರು …

Leave a Reply

Your email address will not be published. Required fields are marked *