ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಜಲಸಂಪನ್ಮೂಲ ಸಚಿವ ಡಿಕೆಶಿ ವಿರುದ್ದ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ವ್ಯಂಗ್ಯ ಮಾಡಿದ್ದಾರೆ. ಒಣಗಿದ ನದಿ ನೋಡಲು ಸಚಿವ ಡಿಕೆಶಿ ಕೃಷ್ಣಾ ತೀರದತ್ತ ಪ್ರವಾಸ ಕೈಗೊಂಡಿದ್ದಾರೆ. ಕೃಷ್ಣಾ ತೀರಕ್ಕೆ ಆಗಮಿಸಲಿರುವ ಸಚಿವ ಡಿಕೆಶಿ ಜತೆಗೆ ನಾನು ಸಹ ಪ್ರವಾಸ ನಡೆಸಲಿದ್ದೇನೆ. ಒಣಗಿದ ನದಿ ಹೇಗೆ ಕಾಣುತ್ತದೆ ಎಂಬುವುದನ್ನು ನೋಡಲು ಸಚಿವರು ಬರುತ್ತಿದ್ದಾರೆ. ಅವರ ಈ ಪ್ರವಾಸ ಜನರ ಸಮಸ್ಯೆ ಆಲಿಸುವುದಕ್ಕೆ ಅಲ್ಲ. ನೀರಿನ ಹಾಹಾಕಾರದಿಂದ ಕೃಷ್ಣಾ ತೀರದ ಜನಜೀವನ ಹದಗೆಟ್ಟಿದೆ. ಇಷ್ಟು ದಿನ ಬಾರದ ಸಚಿವರು ಈಗ ಬಂರುತ್ತಿದ್ದಾರೆ ಎಂದು ಕೋರೆ ಅಸಮಾಧಾನ ವ್ಯಕ್ತಪಡಿಸಿದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





