ಮಂಡ್ಯ: ಸತತವಾಗಿ ಸುರಿಯುತ್ತಿರುವ ಮಳೆಗೆ ಮನೆ ಧರೆಗೆ ಉರುಳಿದ ಘಟನೆ ಮಂಡ್ಯ ಸಂತೇಬಾಚಹಳ್ಳಿ ಹೋಬಳಿಯ ದೊಡ್ಡಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಜಯಲಕ್ಷ್ಮಿ ಎಂಬುವವರಿಗೆ ಸೇರಿದ ಮನೆ ಇದಾಗಿದೆ.ಸತತವಾಗಿ ಮಳೆ ಸುರಿಯುತ್ತಿರುವ ಮಳೆಗೆ ಮನೆ ಗೋಡೆ ಕುಸಿದು ಪರಿಣಾಮ ಮನೆಯಲ್ಲಿ ಇದ್ದ ರಾಗಿ ಅಕ್ಕಿ ದಿನಸಿ ಮತ್ತು ಅಡುಗೆ ಪಾತ್ರೆ ಗಳು ಹಾಳಗಿವೆ.ಮನೆಯಲ್ಲಿ ತಾಯಿ ಮಗಳು ಇಬ್ಬರೆ ಇದ್ದರು ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಅಕ್ಕಪಕ್ಕದ ಮನೆಯವರು ಕೂಡಲೇ ಸಹಾಯ ಮಾಡಿ ತಾಯಿ ಮತ್ತು ಮಗಳನ್ನು ರಕ್ಷಿಸಿದ್ದಾರೆ.ಇವರು ಅದಿಕರ್ನಾಟಕ ಜನಾಂಗಕ್ಕೆ ಸೇರಿದ್ದ ಇವರ ಗಂಡ ಅನಾರೋಗ್ಯದ ಕಾರಣ ತಿರಿಹೊಗಿದ್ದು.ಇವರ ಸಹಾಯ ಮಾಡಲು ಯಾರು ಇಲ್ಲದ ಕಾರಣ ತಾಲೂಕು ಅಡಳಿತ ಇತ್ತ ಗಮನಹರಿಸಿ ಪರಿಹಾರ ಕೊಡಿಸಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡರು..
bigtvnews | Hubli Dharwad News | Kannada News | Karnataka News Hubli News | News In Hubli | Local news





