ಉ-ಕ ಪ್ರತ್ಯೇಕ ರಾಜ್ಯ ಕುರಿತು ನಾಡೋಜ ಡಾ. ಪಾಪು ಹೇಳಿಕೆ ವಿಚಾರ
ಈ ಬಗ್ಗೆ ನಾನೇನೂ ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡಲ್ಲ
ಉತ್ತರಕರ್ನಾಟಕಕ್ಕೆ ಯಾವ ರೀತಿ ಅನ್ಯಾಯವಾಗಿದೆ ಅವರನ್ನೇ ಕೇಳಿ
ಯಾವ ರೀತಿ ಅನ್ಯಾಯವೆಂದು ಪಾಟೀಲ ಪುಟ್ಟಪ್ಪನವರನ್ನೇ ಕೇಳಿ
ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಯಮ್ಯ ಹೇಳಿಕೆ
ವಿಮಾನ ನಿಲ್ದಾಣದಿಂದ ಬಾದಾಮಿಗೆ ತೆರಳುವ ಮೊದಲು ಹೇಳಿಕೆ
ಯಾವಾಗಲೂ ಅಖಂಡ ಕರ್ನಾಟಕದ ಕನಸು ಕಾಣಬೇಕೇ ಹೊರತು
ಯಾವುದೇ ಕಾರಣಕ್ಕೂ ಪ್ರತ್ಯೇಕ ರಾಜ್ಯದ ಕನಸು ಕಾಣಬಾರದು
ಪ್ರತ್ಯೇಕ ರಾಜ್ಯದ ಪ್ರಶ್ನೆ ಅಷ್ಟೇ ಅಲ್ಲ, ಆ ಬಗ್ಗೆ ಚರ್ಚೆ ಆಗಲೇಬಾರದು
ನಾವೆಲ್ಲ ಅಖಂಡ ಕರ್ನಾಟಕದಲ್ಲಿ ಇರೋವಂತವರು
ಹಾಗಾಗಿ ಪ್ರತ್ಯೇಕ ರಾಜ್ಯ ಅಲ್ಲ, ಅಖಂಡ ಕರ್ನಾಟಕ ಕನಸು ಕಾಣಬೇಕು
ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಸಾಕಷ್ಟು ಅಭಿವೃದ್ಧಿ ಮಾಡಿದ್ದೀವಿ
ಉತ್ತರಕರ್ನಾಟಕಕ್ಕೆ ಬಜೆಟ್ ನಲ್ಲಿ ಅನ್ಯಾಯವೇನೂ ಆಗಿಲ್ಲ
ನಾವು ಮಂಡಿಸಿದ ಬಜೆಟ್ ಕಾರ್ಯಕ್ರಮಗಳು ಮುಂದುವರೆಯುತ್ತಿವೆ
ನಮ್ಮ ಕಾರ್ಯಕ್ರಮಗಳು ಮುಂದುವರೆದ್ರೇ ಅನ್ಯಾಯ ಹೇಗಾಗುತ್ತೆ
ಹಾಗಾಗಿ ಉತ್ತರಕರ್ನಾಟಕಕ್ಕೆ ಅನ್ಯಾಯದ ಪ್ರಶ್ನೆಯೇ ಉದ್ಭವಿಸಲ್ಲ
ಹೈದರಾಬಾದ್ ಕರ್ನಾಟಕ ಪ್ರದೇಶಕ್ಕಾಗಿ 371(ಜೆ) ಜಾರಿಯಾಗಿದೆ
ಹೈ-ಕ ಭಾಗಕ್ಕೆ 1,500 ಕೋಟಿ ರೂ. ವಿಶೇಷ ಅನುದಾನ ನೀಡಿದ್ದೀವಿ
ಡಾ. ನಂಜುಂಡಪ್ಪ ವರದಿ ಅನುಸಾರ 3 ಸಾವಿರ ಕೋಟಿ ರೂ. ಕೊಟ್ಟಿದ್ದೇವೆ
ಅದೆಲ್ಲ ಅನುದಾನ ಉತ್ತರಕರ್ನಾಟಕದ ಅಭಿವೃದ್ಧಿಗೆ ಬರೋದಿಲ್ವಾ
ಕೃಷ್ಣ ಮೇಲ್ದಂಡೆ ಯೋಜನೆಗೆ ಹೆಚ್ಚು ದುಡ್ಡು ಕೊಡ್ತೀವಿ
ಇನ್ನೂ ಹೆಚ್ಚು ಕೊಡ್ಬೇಕು ಅನ್ನೋದು ಬೇರೆ ವಿಚಾರ
ಹಾಗಂತಾ ಅನ್ಯಾಯವಾಗಿದೆ ಅನ್ನೋದು ಸರಿಯಲ್ಲ
ಸಿಎಂ ಹೆಚ್ ಡಿಕೆ ಕಣ್ಣೀರಿನ ವಿಚಾರದ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಿದಾರೆ
ಪಕ್ಷದ ವೇದಿಕೆಯಲ್ಲಿ ಕುಮಾರಸ್ವಾಮಿ ಆ ರೀತಿ ಕಣ್ಣೀರು ಹಾಕಿದ್ದಾರೆ,
ಆ ಬಗ್ಗೆ ಪದೇಪದೆ ಯಾಕೆ ಕೇಳ್ತೀರಿ..
ಕೋಳಿವಾಡ ನನ್ನ ಹೆಸರು ಹೇಳಿದ್ದಾರಾ.. ಮತ್ತೆ..
ಇನ್ ಡೈರೆಕ್ಟಾಗಿ ಹೇಳೋದಕ್ಕೆಲ್ಲ ಆನ್ಸರ್ ಮಾಡೋಕಾಗಲ್ಲ
ನಾಳೆ ಬದಾಮಿಯಲ್ಲಿ ಕೆಡಿಪಿ ಸಭೆ ಕರೆದಿರುವೆ ಅದಕ್ಕಾಗಿ ಹೋಗ್ತಿದ್ದೀನಿ
ಬದಾಮಿ ಎಂಎಲ್ ಎ ಆದ್ಮೇಲೆ ಮೊದಲ ಕೆಡಿಪಿ ಮೀಟಿಂಗ್ ಮಾಡ್ತಿರುವೆ
bigtvnews | Hubli Dharwad News | Kannada News | Karnataka News Hubli News | News In Hubli | Local news





