ಕ್ಷುಲ್ಲಕ ಕಾರಣಕ್ಕಾಗಿ ಎರಡು ಗುಂಪುಗಳ ಮಧ್ಯೆ ಹೊಡೆದಾಡಿಕೊಂಡು ಚಾಕುವಿನಿಂದ ಇರಿದ ಘಟನೆನೇಕಾರ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಹುಸೇನ್ ಬಿಜಾಪುರ ಎಂಬ ಯುವಕನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಗಾಯಗೊಂಡಿರುವ ಹುಸೇನ್ ಬಿಜಾಪುರ ನಗರದ ಸೆಟ್ಲಮೆಂಟ್ ನಿವಾಸಿಯಾಗಿದ್ದು, ನೇಕಾರ ನಗರದ ಯುವಕರು ಹಳೇ ವೈಷಮ್ಯ ದಿಂದ ಚಾಕು ಹಾಕಿದ್ದಾರೆ ಎನ್ನಲಾಗಿದೆ. ಸೂರಿ, ಗಿರಿ, ಸತೀಶ ಸೇರಿದಂತೆ 25 ಕ್ಕೂ ಅಧಿಕ ಯುವಕರು ಹಲ್ಲೆ ನಡೆಸಿ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Check Also
ಕಾಲೇಜಿನ ಆವರಣದಲ್ಲಿಯೇ ವಿದ್ಯಾರ್ಥನಿಗೆ ಚಾಕು ಇರಿತ: ಬಿವ್ಹಿಬಿ ಕಾಲೇಜಿನಲ್ಲಿ ಘಟನೆ
ಹುಬ್ಬಳ್ಳಿ: ವಿದ್ಯಾನಗರದ ಬಿವಿಬಿ ಕ್ಯಾಂಪಸ್ನಲ್ಲಿಯೇ ವಿದ್ಯಾರ್ಥಿಯೋರ್ವಳಿಗೆ ಮನಬಂದಂತೆ ಚಾಕುವಿನಿಂದ ಇರಿದ ಘಟನೆ ನಡೆದಿದ್ದು, ವಿದ್ಯಾರ್ಥಿ ಸಮೂಹ ತಲ್ಲಣಗೊಂಡಿದೆ. ಮಳೆಯಿಂದ ತಣ್ಣಗಾಗಿದ್ದ …