ಧಾರವಾಡ: ಬೈಕ್ ಒಂದರಲ್ಲಿ ಅಡಗಿ ಕುಳಿತಿದ್ದ ಆಭರಣದ ಹಾವನ್ನು ಉರಗ ತಜ್ಞ ತಿಪ್ಪಣ್ಣ ರಕ್ಷಿಸಿದ್ದಾರೆ.ಧಾರವಾಡದ ಹೊಸಯಲ್ಲಾಪುರದ ಬೈಕ್ ಒಂದರಲ್ಲಿ ಈ ಹಾವು ಅಡಗಿ ಕುಳಿತಿತ್ತು. ಇದನ್ನು ಕಂಡ ಸ್ಥಳೀಯರು ಕೂಡಲೇ ಉರಗ ತಜ್ಞ ತಿಪ್ಪಣ್ಣ ಅವರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ತಿಪ್ಪಣ್ಣ ಆ ಹಾವನ್ನು ಹೊರ ತೆಗೆದು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬಂದಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

