ಬೆಂಗಳೂರು: ಕೊರೊನಾ ವೈರಸ್ ಪ್ರಕರಣಗಳು ಹೆಚ್ಚುತ್ತಿದ್ದು, ಒಮಿಕ್ರಾನ್ ಪ್ರಕರಣ ರಾಜ್ಯ ರಾಜಧಾನಿಯಲ್ಲಿ ಏರುತ್ತಲೇರಿವುದು ಜನರ ನಿದ್ದೆಗೆಡಸಿದೆ. ಸಿಲಕಾನ್ ಸಿಟಿ ಜನ ಭಯ ಬೀತರಾಗಿ ಊರು ಬಿಡುತ್ತಿದ್ದಾರೆ.
ಈಗ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಆದರೆ ಮುಂದೆ ಲಾಕ್ ಡೌನ್ ಜಾರಿ ಮಾಡಿದರೆ ಹೇಗೆ ಬದುಕುವುದು ಎಂದು ರಾತ್ರೊ ರಾತ್ರಿ ತಮ್ಮ ಊರುಗಳತ್ತ ಗುಳೆ ಹೊರಟಿದ್ದಾರೆ.
ಈಗಾಗಲೇ ರಾಜ್ಯ ಸರಕಾರ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿಗೊಳಿಸಿದೆ, ಮುಂದೆ ಲಾಕ್ ಡೌನ್ ಮಾಡಿದರು ಮಾಡಬಹುದು. ಎರಡನೇ ಅಲೆಯಲ್ಲಿಯು ಕೂಡಾ ಸರಕಾರ ಇದೇ ರೀತಿ ಮಾಡಿತ್ತು, ಆಗ ಎಷ್ಟೊ ಜನರಿಗೆ ತಿಂಗಳುಗಟ್ಟಲೆ ಊಟ, ಬಟ್ಟೆಗು ಸಮಸ್ಯೆ ಉಂಟಾಗಿತ್ತು. ಮತ್ತೆ ಇದೇ ರೀತಿ ಆದರೆ ಜನರಿಗೆ ಬದುಕಲು ಅಸಾಧ್ಯ ಎಂದು ಜನರು ಊರಿನತ್ತ ಮುಖ ಮಾಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

