ಹುಬ್ಬಳ್ಳಿ: ಮೊದಲೆ ಬಿಸಿಲು ನೆತ್ತಿಯ ಮೇಲೆ ಧಗ ಧಗ ಕುದಿಯುತ್ತಿದೆ. ಸಾಯಂಕಾಲ ವೇಳೆ ಮಳೆಯ ಆರ್ಭಟ. ಇವೆಲ್ಲದರ ನಡುವೆ ಜನರು ತಮ್ಮ ಜೀವನವನ್ನು ಸಾಗಿಸಬೇಕು. ನಮ್ಮ ಹುಬ್ಬಳ್ಳಿ ಧಾರವಾಡ ಸ್ಮಾರ್ಟ್ ಸಿಟಿ ಆಗುತ್ತಿದೆ ನಿಜಾ. ಆದರೆ ಇದ್ದ ಬಸ್ ನಿಲ್ದಾಣವನ್ನು ತೆರುವು ಮಾಡಿ ಈಗ ಜನರನ್ನು ನಡು ರಸ್ತೆಯಲ್ಲಿ ನಿಲ್ಲುವಂತೆ ಮಾಡಿದ್ದಾರೆ….
ವಾಣಿಜ್ಯ ನಗರಿ ಹುಬ್ಬಳ್ಳಿಯ ಕೇಂದ್ರ ಭಾಗವಾದ ಕಾರ್ಪೊರೇಷನ್ ಬಸ್ ನಿಲ್ದಾಣವನ್ನು ಕಳೆದ ಎರಡು ವರ್ಷಗಳ ಹಿಂದೆಯೇ ತೆರವುಗೋಳಿಸಿದ್ದರು. ಆದರೆ ಇನ್ನೂವರೆಗೂ ಬಸ್ ನಿಲ್ದಾಣ ಮಾಡದೆ ಜನಸಾಮಾನ್ಯರನ್ನು ಬೀದಿಗೆ ಎಳೆದಂತಾಗಿದೆ. ದಿನೆ ದಿನೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಈ ಬಸ್ ನಿಲ್ದಾಣಕ್ಕೆ ವಯೋವೃದ್ಧರು ಬರುತ್ತಾರೆ. ಆದರೆ ಅವರೆಲ್ಲ ಎಲ್ಲಿ ಕೂಡಬೇಕು ಎಂಬುದು ತಿಳಿಯದಂತಾಗಿದೆ. ಇದರಿಂದ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಕಿಡಿಕಾರುತಿದ್ದು ಬೇಗನೆ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೆಕಾಗಿದ್ದು ಅಧಿಕಾಗಳಿಗೆ ಸಾರ್ವಜನಿಕರ ಬೇಡಿಕೆಯಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

