ಮದ್ಯ ಕುಡಿದು ಬಂದು ಕಿರುಕುಳ, ಅಮಾಯಕ ಹೆಣ್ಣು ಮಗಳ ಆತ್ಮಹತ್ಯೆ!.
ಪತಿ ಅಶೋಕ್ ಕಿರುಕುಳ ತಾಳಲಾರದೆ ಪತ್ನಿ ಶಾರದಾ ತನ್ನ 3 ಮಕ್ಕಳೊಂದಿಗೆ ಕೃಷ್ಣ ನದಿಗೆ ಹಾರಿ ಜೀವ ಬಿಟ್ಟಿದ್ದಾಳೆ. ನದಿಗೆ ಹಾರಿದ್ದನ್ನು ನೋಡಿದ ಸ್ಥಳೀಯರು ಮುಳುಗುತ್ತಿದ್ದ ಅನುಕ್ಷಾಳನ್ನು ರಕ್ಷಣೆ ಮಾಡಿದ್ದರು. ನಂತರ ಆಕೆಯನ್ನು ರಾಯಬಾಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಚಿಕಿತ್ಸಗೆ ಸ್ಪಂದಿಸದೆ ಆಕೆಯೂ ದುರ್ಮರಣಕ್ಕಿಡಾಗಿದ್ದಾಳೆ . ಈ ಘಟನೆಯು ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಬಳಿ ನಡೆದಿದೆ . ತಾಯಿ ಶಾರದಾ (32), ಮಕ್ಕಳಾದ ಅನುಷ್ಕಾ , ಆದರ್ಶ ಹಾಗೂ ಅಮೃತ ಮೃತ ದುರ್ದೈವಿಗಳು. ಸದ್ಯ ಪತಿ ಅಶೋಕ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ
bigtvnews | Hubli Dharwad News | Kannada News | Karnataka News Hubli News | News In Hubli | Local news

