Breaking News

ಸಿಡಿಲು ಹೊಡೆತಕ್ಕೆ ಮೂಕ ಪ್ರಾಣಿಗಳು ಬಲಿ


ಕುಂದಗೋಳ : ತಾಲೂಕಿನ ಎಲ್ಲೆಡೆ ಸುರಿದ ಭಾರಿ ಮಳೆ ಹಾಗೂ ಗುಡುಗು ಸಿಡಿಲಿನ ಹೊಡೆತಕ್ಕೆ 13 ಕುರಿಗಳು ಹಾಗೂ ಒಂದು ಕುದುರೆ ಮೃತಪಟ್ಟ ಘಟನೆ ದೇವನೂರು ಗ್ರಾಮದ ಹೊರವಲಯದಲ್ಲಿ ನಿನ್ನೆ ಸಂಜೆ ನಡೆದಿದೆ .

ದೇವನೂರು ಗ್ರಾಮದ ಹೊರವಲಯದ ಜಮೀನೊಂದರಲ್ಲಿ ದೊಡ್ಡಿ ಹಾಕಿ ವಾಸವಿದ್ದ ಕುರಿಗಾಹಿಗಳ ಹಿಂಡಿಗೆ ಸಿಡಿಲು ಅಪ್ಪಳಿಸಿದ ಪರಿಣಾಮ 13 ಕುರಿಗಳು ಹಾಗೂ ಒಂದು ಕುದುರೆ ಸಿಡಿಲಿಗೆ ಬಲಿಯಾಗಿ ಮೃತಪಟ್ಟಿವೆ. ಬೆಳಗಾವಿ ಜಿಲ್ಲಾ ರಾಯಭಾಗದಿಂದ ಬಂದು ದೇವನೂರು ಗ್ರಾಮದ ಹೊರವಲಯದಲ್ಲಿ ವಾಸವಿದ್ದ ವಿಠಲ ಕಾಣಪ್ಪಲಟ್ಟಿ ಎಂಬ ಕುರಿಗಾಹಿಗೆ ಸೇರಿದ 13 ಕುರಿಗಳು ಹಾಗೂ ಒಂದು ಕುದುರೆ ಸಿಡಿಲು ಬಡಿದು ಸಾವನ್ನಪ್ಪಿದ್ದು ಕುರಿಗಾಹಿ ಕಂಗಾಲಾಗಿದ್ದಾರೆ ಕುಂದಗೋಳ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಕೂಡಲೇ ಮಳೆ ಬಂದರೆ ಊರಿಗೆ ಸೇರುವಂತೆ ಪೋಲಿಸರು ಸೂಚನೆ ನೀಡಿದ್ದಾರೆ .

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *