Breaking News

ಮದುವೆ ಆಗಬೇಕಿದ್ದವ ಮಸಣ ಸೇರಿದ ಅಕ್ಷತೆ ದಿನವೇ ನಡೆಯಿತು ತಿಥಿ

ಧಾರವಾಡ : ಮದುವೆಯ ಆಹ್ವಾನ ಪತ್ರಿಕೆ ಹಂಚಿದ್ದ ಮದುಮಗನೇ ಮದುವೆಗೂ ಮುನ್ನವೇ ಮೃತಪಟ್ಟಿರುವ ಘಟನೆ ಧಾರವಾಡ ತಾಲೂಕಿನ ಕಬ್ಬೇನೂರು ಗ್ರಾಮದಲ್ಲಿ ನಡೆದಿದ್ದು

ತಡವಾಗಿ ಬೆಳಕಿಗೆ ಬಂದಿದೆ . ಕಬ್ಬೇನೂರು ಗ್ರಾಮದ ರಾಘವೇಂದ್ರ ಶಿಂಧೋಗಿ ( 32 ) ಎಂಬುವವರೇ ಮೃತಪಟ್ಟ ವ್ಯಕ್ತಿ . ಮೇ 12 ರಂದು ಕಲಘಟಗಿ ತಾಲೂಕಿನ ವಧುವಿನೊಂದಿಗೆ ಮದುವೆ ನಿಶ್ಚಿಸಲಾಗಿತ್ತು . ಹೀಗಾಗಿ ಮದುವೆ ಸಂಭ್ರಮದ ಖುಷಿಯಲ್ಲಿದ್ದ ಕುಟುಂಬಸ್ಥರು ಮದುವೆ ಆಮಂತ್ರಣ ಹಂಚಿ ಬಂದು , ಮೇ 10 ರಂದು ಮನೆಯಲ್ಲಿ ದೇವತಾ ಕಾರ್ಯಕ್ಕೆ ಸಿದ್ಧತೆ ಮಾಡಿಕೊಂಡಿದ್ದರು . ಮೇ 9 ರಂದು ಇಡೀ ದಿನ ಗೆಳೆಯರಿಗೆ ಮದುವೆಯ ಆಹ್ವಾನ ಕೊಟ್ಟು ಬಂದು ಮನೆಯಲ್ಲಿ ಮಲಗಿದ್ದ ರಾಘವೇಂದ್ರ , ಮೇ 10 ರಂದು ಬೆಳಿಗ್ಗೆ ಎಲ್ಲರೂ ಎದ್ದಾಗ ಮನೆಯಲ್ಲಿಯೇ ಇರಲಿಲ್ಲ .

ಮದುಮಗನಿಗೆ ಹುಡುಕಾಟ ನಡೆಸಿದ ಕುಟುಂಬಸ್ಥರಿಗೆ ಸಂಜೆ ಹೊತ್ತಿಗೆ ಹೊಲವೊಂದರಲ್ಲಿ ರಾಘವೇಂದ್ರನ ಶವ ಪತ್ತೆಯಾಗಿದ್ದು , ಪಕ್ಕದಲ್ಲಿಯೇ ಕ್ರಿಮಿನಾಶಕದ ಬಾಟಲಿಯೂ ಸಿಕ್ಕಿದೆ . ಇದು ಮೇಲ್ನೋಟಕ್ಕೆ ಆತ್ಮಹತ್ಯೆ ಮಾಡಿರುವ ಬಗ್ಗೆ ಕಂಡು ಬಂದರೂ ಕೊಲೆ ಆಗಿರುವ ಬಗ್ಗೆ ಗ್ರಾಮಸ್ಥರಲ್ಲಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ

ಕುಟುಂಬಸ್ಥರ ಪ್ರಾಥಮಿಕ ಮಾಹಿತಿ ಅನ್ವಯ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿರುವ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ . ಮೇ 12 ರಂದು ಮದುವೆ ಆಗಬೇಕಿದ್ದ ಮನೆಯಲ್ಲಿ ಮದುವೆ ನಿಶ್ಚಿಯಿಸಿದ್ದ ದಿನದಂದೇ ತಿಥಿ ಕಾರ್ಯ ನೆರವೇರಿಸಲಾಗಿದೆ

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *