ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಾರ್ಡ್ ನಂ 31 ರ ತಾರಿಹಾಳದಿಂದ ಸಿಬಿಟಿ ವರೆಗಿನ ಬಸ್ ಸೇವೆಯನ್ನು ಸಾರ್ವಜನಿಕರಿಗಾಗಿ ಮತ್ತು ಶಾಲಾ ಮಕ್ಕಳ ಸುಗಮ ಸಂಚಾರಕ್ಕಾಗಿ ಶಾಸಕ ಅರವಿಂದ್ ಬೆಲ್ಲದ್ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ರಾಮಣ್ಣ ಬಡಿಗೇರ್ , ಶಂಕರ್ ಹೊಸಮನಿ , ಮುಖಂಡರಾದ ಬಸಪ್ಪ ಉಣಕಲ್ , ಮಲ್ಲಿಕಾರ್ಜುನ ಕಾಡನಗೌಡರ , ಶಿವಪ್ಪಗೋಮಾಡಿ , ಹಣಮಂಪ್ಪಹಿಂಡಸಗೇರಿ , ಸಿದ್ದಪ್ಪ ಅರವಾಳ , ಮೌನೇಶ್ ಬಡಿಗೇರ್ , ಯಲ್ಲಪ್ಪ ಹರಿಜನ್ , ಬಿ.ವೆಂಕಟೇಶ್ , ಈರಣ್ಣ ಪೂಜಾರ್ , ಸೋಮಶೇಖರ್ ಪೂಜಾರ್ ಸೇರಿದಂತೆ ತಾರೀಹಾಳ ಹಾಗೂ ಗೋಕುಲ್ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು .