ಹುಬ್ಬಳ್ಳಿ : ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ‘ ಸ್ವಾತಂತ್ರ್ಯದ ಅಮೃತ ಮಹೋತ್ಸವ ‘ ಅಂಗವಾಗಿ , ದೇಶಾದ್ಯಂತ 25 ದಿನಗಳ ಕಾಲ 18 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಬೂಸ್ಟರ್ ಡೋಸ್ ನೀಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ .
ಅದೇ ರೀತಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ . ಶ್ರೀಧರ್ ದಂಡೆಪ್ಪನವರ , ಡಾ . ಪ್ರಕಾಶ ನರಗುಂದ ಅವರ ನೇತೃತ್ವದಲ್ಲಿ , ನಗರದ ಬದಾಮಿ ನಗರದ ಬಾಲ ಮಂದಿರದಲ್ಲಿ ಸಾರ್ವಜನಿಕರಿಗೆ ಬೂಸ್ಟರ್ ಡೋಸ್ ಹಾಕಿದರು .
ಇಂದು ಬೆಳಗ್ಗೆಯಿಂದ ಲಸಿಕಾ ಅಭಿಯಾನ ಆರಂಭವಾಗಿದ್ದು , ವಾರದಲ್ಲಿ ಸೋಮವಾರ , ಬುಧವಾರ , ಶುಕ್ರವಾರ ದಿನಗಳಂದು ಧಾರವಾಡ ಜಿಲ್ಲಾಧ್ಯಂತ ಕೋವಿಡ್ ಲಸಿಕೆಯನ್ನು ಹಾಕಲು ಮುಂದಾಗಿದ್ದಾರೆ . ಅದೇ ರೀತಿ ಜನರು ಕೂಡ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಿದ್ದಾರೆ .