Breaking News

ಜೊತೆ ಜೊತೆಯಲಿ ಧಾರವಾಹಿಯಿಂದ ಅನಿರುದ್ಧ ಔಟ್ : ಅನೂಪ್​ ಭಂಡಾರಿಗೆ ಆಫರ್



ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿರುವ ಜೊತೆ ಜೊತೆಯಲಿ ಧಾರವಾಹಿ ಸದ್ಯ ವಿವಾದದ ಕಾರಣಗಳಿಂದಲೇ ಸುದ್ದಿಯಲ್ಲಿದೆ. ಈ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಿರುದ್ಧ ಧಾರವಾಹಿ ತಂಡದಿಂದ ಗೇಟ್​ಪಾಸ್​​​ ಪಡೆದಿದ್ದಾರೆ.

ಅಲ್ಲದೇ ಕಿರುತೆರೆಯಿಂದ 2 ವರ್ಷಗಳ ನಿಷೇಧವನ್ನೂ ಅನುಭವಿಸುತ್ತಿದ್ದಾರೆ. ಅನಿರುದ್ಧ ಜತ್ಕರ್​ ಹಾಗೂ ಆರೂರು ಜಗದೀಶ್​ ನಡುವಿನ ಗುದ್ದಾಟದಿಂದ ಧಾರವಾಹಿಗೆ ಇದೀಗ ಮುಖ್ಯ ಪಾತ್ರಧಾರಿ ಇಲ್ಲದಂತಾಗಿದೆ.

ಜೊತೆ ಜೊತೆಯಲಿ ಧಾರವಾಹಿ ತಂಡವು ಇದೀಗ ಮುಖ್ಯ ಪಾತ್ರಧಾರಿಯ ಹುಡುಕಾಟದಲ್ಲಿದೆ. ಈಗಾಗಲೇ ಆರ್ಯವರ್ಧನ್​​ ಪಾತ್ರದಲ್ಲಿ ಅನಿರುದ್ಧ ಕರುನಾಡ ಜನತೆಯ ಮನಸ್ಸನ್ನು ಗೆದ್ದಿರುವ ಹಿನ್ನೆಲೆಯಲ್ಲಿ ಈ ಪಾತ್ರಕ್ಕಾಗಿ ಸೂಕ್ತವಾದ ಕಲಾವಿದನನ್ನು ಆಯ್ಕೆ ಮಾಡಬೇಕಾದ ಬಹುದೊಡ್ಡ ಜವಾಬ್ದಾರಿ ಇದೀಗ ಧಾರವಾಹಿ ತಂಡದ ಮೇಲಿದೆ .  ಹೌದು.. ನಿರ್ದೇಶಕ ಅನೂಪ್​ ಭಂಡಾರಿಗೆ ಈ ಧಾರವಾಹಿಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುವಂತೆ ಆಫರ್​ ಬಂದಿದೆಯಂತೆ.

Share News

About BigTv News

Check Also

ಕುವೆಂಪು ವಿವಿಯಲ್ಲಿ ಅಧಿಕಾರಿಯ ಡಿಜಿಟಲ್ ಕೀ ಬಳಸಿ ಅಂಕ ತಿದ್ದಿದ ಇಬ್ಬರ ವಿರುದ್ಧ FIR ದಾಖಲು!

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ UUCMS ತಂತ್ರಾಂಶ ದುರುಪಯೋಗಪಡಿಸಿಕೊಂಡು ಫೇಲ್ ಆಗಿದ್ದ ವಿದ್ಯಾರ್ಥಿಯ ಅಂಕಗಳನ್ನು ಅಕ್ರಮವಾಗಿ ತಿದ್ದಿ ಪಾಸ್ ಮಾಡಿರುವ ಆರೋಪ …

Leave a Reply

Your email address will not be published. Required fields are marked *