ಹುಬ್ಬಳ್ಳಿ : ಇಂದು ವಾಣಿಜ್ಯ ನಗರಿ ಹುಬ್ಬಳ್ಳಿಗೆ ರಾಷ್ಟ್ರಪತಿ ದೌಪದಿ ಮುರ್ಮು ಅವರು ಆಗಮಿಸುತ್ತಿದ್ದು , ಕೆಲ ಜನರಿಗೆ VIP ಪಾಸ್ ನೀಡಿದ್ದಾರೆ .
ಆದ್ರೆ ಕಾರ್ಯಕ್ರಮಕ್ಕೆ ತಡವಾಗಿ ಬಂದ್ರೆ ಯಾವ ಪಾಸ್ ಇದ್ರು ನೋ ಎಂಟ್ರಿ . ಎಷ್ಟೇ ವಾದ ಮಾಡಿದ್ರು ಪೊಲೀಸರು ಮರಳಿ ಕಳಿಸುತ್ತಿದ್ದಾರೆ . ಹೌದು ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಪಾಲಿಕೆ ವತಿಯಿಂದ ಪೌರ ಸನ್ಮಾನ ಹಮ್ಮಿಕೊಂಡಿದೆ . ಸನ್ಮಾನ ಕಾರ್ಯಕ್ರಮವನ್ನು ವೀಕ್ಷಿಸಲು VIP VVIP ಪಾಸ್ ನೀಡಿದ್ದಾರೆ . ಆದ್ರೆ ವಿಪರ್ಯಾಸವೆಂದರೆ ಕಾರ್ಯಕ್ರಮಕ್ಕೆ ತಡವಾಗಿ ಬಂದ ಕಾರಣ ಪೊಲೀಸರು ಪಾಸ್ ಇದ್ರು ಕೂಡ ಎಂಟ್ರಿ ಮಾಡುತ್ತಿಲ್ಲ .
ಇನ್ನು ತಡವಾಗಿ ಬಂದ ಬಿಜೆಪಿ , ಕಾಂಗ್ರೆಸ್ ಮುಖಂಡರು ಕೂಡ ಒಳಗೆ ಬಿಡುವ ವಿಚಾರಕ್ಕೆ ಪೊಲೀಸರ ಜೊತೆ ವಾಗ್ವಾದ ಮಾಡುತ್ತಿರುವುದು ಸಾಮಾನ್ಯವಾಗಿದೆ . ಯಾರೇ ಆಗಲಿ , ಏನೇ ಮಾಡಲಿ ನಾವು ಮಾತ್ರ ಒಳಗೆ ಬಿಡಲ್ಲ ಎಂದು ಪೊಲೀಸರು ಮರಳಿ ಕಳಿಸುತ್ತಿದ್ದಾರೆ .
bigtvnews | Hubli Dharwad News | Kannada News | Karnataka News Hubli News | News In Hubli | Local news

