Breaking News

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತವೆ ಹೊರತು ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ

ಹುಬ್ಬಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೇವಲ ಶ್ರೀಮಂತರ ಪರವಾಗಿ ಕೆಲಸ ಮಾಡುತ್ತವೆ ಹೊರತು ಬಡವರ ಪರವಾಗಿ ಒಂದೇ ಒಂದು ಕೆಲಸ ಮಾಡಿಲ್ಲ‌. ವೈಯಕ್ತಿಕ ಹಿತಾಸಕ್ತಿಯಿಂದಲೇ ಕೃಷಿ ಕಾಯಿದೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆದರು ರಾಜ್ಯದಲ್ಲಿ ವಾಪಾಸ್ ಪಡೆದಿಲ್ಲ. ಈ ಹಿನ್ನೆಲೆಯಲ್ಲಿ ಬರುವ ಚಳಿಗಾಲದ ಅಧಿವೇಶದಲ್ಲಿ ಕಬ್ಬು ಬೆಳೆಗಾರರು ಹಾಗೂ ಸ್ಮಾರ್ಟ್ ಸಿಟಿ ಕಾಮಗಾರಿ ಕುರಿತಂತೆ ಶ್ವೇತ ಪತ್ರ ಹೊರಡಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ಒತ್ತಾಯಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರು ಸಹಿತ ಕಬ್ಬು ಬೆಳೆಗಾರರ ಸಮಸ್ಯೆ ಜ್ವಲಂತ ಸಮಸ್ಯೆಯಾಗಿಯೇ ಉಳಿದಿದೆ. ನಮ್ಮ ರಾಜ್ಯದ ಕಬ್ಬು ಪಂಜಾಬಿನಲ್ಲಿ ಬೆಳೆಯುವ ಕಬ್ಬಿಗೆ ಹೋಲಿಕೆ ಮಾಡಿದರೇ ಗುಣಮಟ್ಟದಲ್ಲಿ ನಮ್ಮದು ಉತ್ತಮವಾಗಿದೆ. ಆದರೂ ರೈತರಿಗೆ ದೇಶದಲ್ಲಿ ಅತಿ ಕಡಿಮೆ ಬೆಂಬಲ ಬೆಲೆ ಸಿಗುತ್ತಿರುವುದು ದುರಂತ ಎಂದರು.

ಸರ್ಕಾರಗಳು ಹಸಿರು ಟವಲ್ ಹಾಕಿಕೊಂಡು ನಾವು ರೈತಪರ ಸರ್ಕಾರ ಎಂದು ಬಿಂಬಿಸಿಕೊಳ್ಳುತ್ತವೆ ಹೊರತು ರೈತರಿಗೆ ಅನುಕೂಲ ಮಾಡಿಕೊಡುವುದಿಲ್ಲ. ಹಾಗಾಗಿ ಸರ್ಕಾರಗಳು ಇನ್ನಾದರೂ ರೈತಪರ ಕೆಲಸ ಮಾಡಿ ತೋರಿಸಲಿ ಎಂದು ಸವಾಲ್ ಹಾಕಿದರು.

ಸ್ಮಾರ್ಟ್ ಸಿಟಿ ಉದ್ದೇಶವೇ ವಿಫಲ:

ಸಣ್ಣ ಸಣ್ಣ ನಗರಗಳು ಬೆಳೆಯುತ್ತಿರುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆ ಜಾರಿಗೆ ತಂದಿದೆ. ಇದರ ಉದೇಶ ರಾಜಕಾಲುವೆ, ನೀರಿನ ಪೈಪ್, ರಸ್ತೆ, ವಿದ್ಯುತ್ ಹೀಗೆ ಮೂಲಭೂತ ಸೌಕರ್ಯಗಳನ್ನು ಗುಣಮಟ್ಟದಲ್ಲಿ ಕೊಡುವುದು ಆಗಿದೆ. ಆದರೆ ಈ ಯೋಜನೆ ಜನರಿಗೆ ಉಪಯೋಗ ಆಗದೇ ಕೇವಲ ಮಂತ್ರಿಗಳು, ಗುತ್ತಿಗೆದಾರರು, ಇಂಜಿನಿಯರ್ ಗಳಿಗೆ ಸಹಾಯವಾಗಿದೆ. ಯಾವುದೇ ಕಾಮಗಾರಿ ವೈಜ್ಞಾನಿಕವಾಗಿ ನಡೆಯುತ್ತಿಲ್ಲ. ಈ ಕಾರಣದಿಂದಲೇ ಸಣ್ಣ ಮಳೆಗೆ ನಗರಗಳು ಕೆರೆಯಂತಾಗುತ್ತಿದೆ. ಬೋರ್ಡ್ ನಲ್ಲಿ ಸಹಿತ ಕಳ್ಳರ ಹೆಸರನ್ನು ಮಾತ್ರ ಹಾಕಿ ಖರ್ಚಾದ ಮೊತ್ತವನ್ನು ಮರೆಮಾಚುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ಭಾವನೆಗಳ ಜೊತೆಗೆ ಆಟವಾಡುತ್ತಿವೆ. ಇದನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ. ಬರುವ ಗುಜರಾತ್ ಚುನಾವಣೆಯಲ್ಲಿ ಆಪ್ ಗೆದ್ದು ನ್ಯಾಷನಲ್ ಪಾರ್ಟಿ ಆಗುವುದು. ಆದರೆ ವಿರೋಧಿಗಳು ನಮ್ಮ ಮೇಲೆ ಸಿಬಿಐ, ಇನ್ ಕಮ್ ಟ್ಯಾಕ್ಸ್ ಎಂದು ಹೆದರಿಸುವ ಕೆಲಸ ಮಾಡುತ್ತಿದೆ. ಬಿಜೆಪಿಯವರ ಹತ್ತಿರ ಹಣದ ಶಕ್ತಿ ಇದೆ. ನಮ್ಮಲ್ಲಿ ಪ್ರಮಾಣಿಕ ಇದೆ ಎಂದರು.

ಭ್ರಷ್ಟಾಚಾರ ಕಾಂಗ್ರೆಸ್ ನ ಕೂಸು ಅದನ್ನು ಬಿಜೆಪಿ ಸಾಕುತ್ತಿದೆ. ರಾಜ್ಯ ಶ್ರೀಮಂತ ರಾಜ್ಯ. ಇಲ್ಲಿ ದುಡ್ಡಿಗೆ ಕಡಿಮೆ ಇಲ್ಲ. ಆದರೆ ಕೇವಲ 25000 ಜನರು ರಾಜ್ಯವನ್ನು ಹೈಜಾಕ್ ಮಾಡಿದ್ದಾರೆ. ಆರೋಗ್ಯ ಮತ್ತು ಶಿಕ್ಷಣವನ್ನು ಸಂಪೂರ್ಣ ಕಮರ್ಷಿಯಲ್ ಆಗಿದೆ. ಪ್ರಾಮಾಣಿಕತೆ ವ್ಯವಸ್ಥೆ ಬರಬೇಕಿದೆ. ಈ ನಿಟ್ಟಿನಲ್ಲಿ ಆಮ್ ಆದ್ಮಿ ಪಕ್ಷ ಸಂಘಟನೆ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಅರವಿಂದ ಕ್ರೇಜಿವಾಲ್ ಕರ್ನಾಟಕದತ್ತ ಗಮನ ಹರಿಸುವರು ಎಂದು ಭಾಸ್ಕರ ರಾವ್ ತಿಳಿಸಿದರು.

Share News

About BigTv News

Check Also

TCS ನಾಸಿಕ್ ಪ್ರಕರಣ: ಆರೋಪಿ ನಿದಾ ಖಾನ್ ಪತಿ ಬಂಧನ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಶಾಖೆಯ ಸುತ್ತಲಿನ ವಿವಾದ ನಾಟಕೀಯ ತಿರುವು ಪಡೆದುಕೊಂಡಿದ್ದು, ಕಂಪನಿಗೆ ಸಂಬಂಧಿಸಿದ ಒಂಬತ್ತು …

Leave a Reply

Your email address will not be published. Required fields are marked *