ಹುಬ್ಬಳ್ಳಿ : ನಗರದ ಜೆ.ಜಿ ಕಾಲೇಜ್ ಆಫ್ ಕಾಮರ್ಸ್ ನಲ್ಲಿ 34 ವರ್ಷಗಳ ಹಿಂದೆ ವ್ಯಾಸಂಗ ಪೂಣ೯ಗೊಳಸಿದ ವಿದ್ಯಾರ್ಥಿ ಸ್ನೇಹ ಸಮ್ಮೇಳನ ಇತ್ತೀಚಿಗೆ ಜರುಗಿತು, ದೇಶ ವಿದೇಶಗಳಿಂದ 81 ಜನ ಸ್ನೇಹಿತರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು .
ಜಿ.ಜಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಲ್.ಪಾಟೀಲ್ ಹಾಗೂ ಡಾ. ವಿಶ್ವನಾಥ್. ಕೊರವಿ ಅವರು ಬಂದಂತಹ ಸ್ನೇಹಿತರಿಗೆ ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಹಳೆ ನೆನಪುಗಳನ್ನು ಕಳೆದರು. ನವೀನ್ ಹೋಟೆಲಿನಲ್ಲಿ ಗುರುಗಳ ಸನ್ಮಾನವನ್ನು ಆಯೋಜನೆ ಮಾಡಲಾಗಿತ್ತು. ಬಂಡಾರಗಲ್ ಸರ್ ಗಳಿಗೆ ಆತ್ಮೀಯವಾದ ಗುರುವಂದನಾ ಸನ್ಮಾನವನ್ನು ಮಾಡಲಾಯಿತು. ಸೇರಿದ ಸ್ನೇಹಿತರುಗಳು ತಮ್ಮ ಕಾಲೇಜಿನ ಹಳೆ ದಿನಗಳ ಬಗ್ಗೆ, ಶಿಕ್ಷಕರ ಬಗ್ಗೆ ಹಾಗೂ ತಮ್ಮ ಜೀವನದಲ್ಲಿ ಸಾಧಿಸಿದ ಮೆಟ್ಟಿಲುಗಳ ಬಗ್ಗೆ ಹೆಮ್ಮೆಯಿಂದ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಗುರುಗಳಾದ ನಟರಾಜ ಸರ್, ನುಲ್ವಿ ಸರ್, ಶಾಮ ಗಾಮನಗಟ್ಟಿ ಸರ್, ಶಿವನಗುತ್ತಿ ಸರ್ , ಮುರುಗೋಡು ಸರ್, ಬೆಂಬಲಗಿ ಸರ್, ಬಳಿಗೆರ್ ಸರ್, ಎನ್. ಆರ್. ಪಾಟೀಲ್ ಸರ್, ಹುಲಕೋಟಿ ಸರ್, ಮಹಾನಗರ ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ, ಈರಣ್ಣ ಸವಡಿ, ತೆಲಂಗಾಣದ ಡಿಜಿಪಿ ಅದಂತಹ ವಿಶ್ವನಾಥ್ ಸಜ್ಜನರ, ಅಮೆರಿಕದಿಂದ ಬಂದಂತ ಕಂದರ್ ಪಟೇಲ್, ಸಿಂಗಪೂರದಿಂದ ಬಂದಂತ ಶಶಿ ನಂಬಿಯಾರ್, ಸಿದ್ದು ಮೂಗುಲಿಶೆಟ್ಟರ್, ಶಂಕರ್ ಪಟೇಲ್, ರವಿ ಮುಧೋಳ್ ಮುಂತಾದವರು ಪಾಲ್ಗೊಂಡಿದ್ದರು.