ಫೋಟೋ ಪಾಲಿಟಿಕ್ಸ್ಗೆ ಮಣೆ ಬೇಡ, ಸಂಘಟನೆಯ ನಾಯಕರಿಗೆ ಮನ್ನಣೆ ಕೊಡಿ! ಡಿಸಿಸಿ ಆಯ್ಕೆ ಕಾಂಗ್ರೆಸ್ಗೆ ಅಗ್ನಿಪರೀಕ್ಷೆ…
ಡಿಸಿಸಿ ಅಧ್ಯಕ್ಷ ಸ್ಥಾನ: ಹೈಕಮಾಂಡ್ ಎಚ್ಚರ! ತಪ್ಪು ಆಯ್ಕೆ ಕಾಂಗ್ರೆಸ್ಗೆ ದುಬಾರಿಯಾಗಬಹುದು..
ಹುಬ್ಬಳ್ಳಿ–ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಇದೀಗ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿಸಿಸಿ ಅಧ್ಯಕ್ಷ ಸ್ಥಾನವು ಕೇವಲ ಒಂದು ಹುದ್ದೆಯಲ್ಲ; ಅದು ಪಕ್ಷದ ಸಂಘಟನೆ, ಕಾರ್ಯಕರ್ತರ ವಿಶ್ವಾಸ ಮತ್ತು ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಜವಾಬ್ದಾರಿಯಾಗಿದೆ…
ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಸಲ್ಲಿಸುವುದು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನ ಹಕ್ಕು. ಆದರೆ ಅರ್ಜಿ ಸಲ್ಲಿಸಿದ್ದರೆ ಮಾತ್ರ ನಾಯಕತ್ವ ಸಾಬೀತಾಗುವುದಿಲ್ಲ. ಕೆಲ ನಾಯಕರ ಜೊತೆ ಫೋಟೋ ತೆಗೆಸಿಕೊಳ್ಳುವುದು, ನಾಲ್ಕು ಜನರ ಮುಂದೆ ದೊಡ್ಡ ದೊಡ್ಡ ಭಾಷಣ ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಿಕೊಳ್ಳುವುದು ನಾಯಕತ್ವದ ಮಾನದಂಡವಾಗಬಾರದು..

ಜಿಲ್ಲಾ ಕಾಂಗ್ರೆಸ್ಗೆ ಬೇಕಾಗಿರುವುದು ಪ್ರದರ್ಶನದ ನಾಯಕನಲ್ಲ; ಪಕ್ಷದ ತತ್ವ-ಸಿದ್ಧಾಂತ ತಿಳಿದಿರುವ, ಸಂಘಟನಾ ಅನುಭವ ಹೊಂದಿರುವ, ಕಾರ್ಯಕರ್ತರ ನೋವು-ನಲಿವು ಅರಿತಿರುವ ಹಾಗೂ ಜನರ ಪರ ಹೋರಾಟ ನಡೆಸಿರುವ ನಾಯಕ. ವರ್ಷಗಳ ಕಾಲ ಪಕ್ಷಕ್ಕಾಗಿ ಬೆವರು ಸುರಿಸಿದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ, ಕೇವಲ ಪ್ರಭಾವ ಅಥವಾ ಪ್ರಚಾರದ ಆಧಾರದ ಮೇಲೆ ಯಾರಿಗಾದರೂ ಹುದ್ದೆ ನೀಡಿದರೆ ಅದರ ರಾಜಕೀಯ ಪರಿಣಾಮವನ್ನು ಪಕ್ಷವೇ ಎದುರಿಸಬೇಕಾಗುತ್ತದೆ….
ಕಾಂಗ್ರೆಸ್ ಹೈಕಮಾಂಡ್ ಈ ಆಯ್ಕೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಡಿಸಿಸಿ ಅಧ್ಯಕ್ಷ ಸ್ಥಾನವು ಯಾರೊಬ್ಬರ ಪ್ರತಿಷ್ಠೆ ಹೆಚ್ಚಿಸುವ ವೇದಿಕೆಯಲ್ಲ; ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆಯನ್ನು ಪುನಶ್ಚೇತನಗೊಳಿಸಿ ಬಲಪಡಿಸುವ ಜವಾಬ್ದಾರಿಯಾಗಿದೆ….
ಇಂದು ತೆಗೆದುಕೊಳ್ಳುವ ನಿರ್ಧಾರವೇ ನಾಳೆಯ ಕಾಂಗ್ರೆಸ್ನ ಭವಿಷ್ಯವನ್ನು ನಿರ್ಧರಿಸಲಿದೆ. ಆದ್ದರಿಂದ ನಿಷ್ಠೆ, ಸಂಘಟನಾ ಅನುಭವ, ಕಾರ್ಯಕರ್ತರ ವಿಶ್ವಾಸ ಮತ್ತು ಜನರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ನಾಯಕನಿಗೆ ಆದ್ಯತೆ ನೀಡುವುದು ಪಕ್ಷದ ಹಿತದೃಷ್ಟಿಯಿಂದ ಅಗತ್ಯವಾಗಿದೆ. ತಪ್ಪು ಆಯ್ಕೆ ಮಾಡಿದರೆ ಅದರ ರಾಜಕೀಯ ಬೆಲೆ ಕಾಂಗ್ರೆಸ್ಗೆ ಭಾರಿಯಾಗುವ ಸಾಧ್ಯತೆಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ…
bigtvnews | Hubli Dharwad News | Kannada News | Karnataka News Hubli News | News In Hubli | Local news

