ಧಾರವಾಡ : ನಗರದಲ್ಲಿ ಆನಂದ ಅಸೋಸಿಯೇಟ್ಸ ಸಹಯೋಗದಲ್ಲಿ ನಗರದ ಸರಸ್ವತಿ ನಿಕೇತನದಲ್ಲಿ ಸರ್ವ ಧರ್ಮದ ವಧು ವರರ ಸಮಾವೇಶ ಜರುಗಿತು. ನಿವೃತ್ತ ಪೋಲೀಸ್ ವರಿಷ್ಠಾಧಿಕಾರಿ ಈರಣ್ಣ ಜಿರಾಳ ಸಮಾವೇಶ ಉದ್ಘಾಟಿಸಿದರು ಮಾತನಾಡಿ, ಆನಂದ ಅಸೋಸಿಯೆಟ್ಸ ಎರಡು ಹೃದಯಗಳ ಮಧ್ಯ ಬಾಂಧವ್ಯ ಬೆಸೆಯುವ ಕೆಲಸ ಮಾಡುವುದು ಶ್ಲಾಘನೀಯ. ವಧು ವರರು ನಿರಂತರ ಸಂಪರ್ಕದಲ್ಲಿದ್ದು ತಮ್ಮ ನೆಚ್ಚಿನ ಬಾಳ ಸಂಗಾತಿ ಆಯ್ಕೆ ಮಾಡಿಕೊಳ್ಳಲು ಸಲಹೆ ನೀಡಿದರು. ನಿವೃತ್ತ ಸಹಾಯಕ ಅಭಿಯಂತರರಾದ ಸುನೀಲ ಕುಲಕರ್ಣಿ ಮಾತನಾಡಿ ಮದುವೆ ಸ್ವರ್ಗದಲ್ಲಿ ನಿಶ್ಚಯಲ್ಲಪಟ್ಟಿರುತ್ತದೆ.

ನಾವು ವಾಸ್ತವದಲ್ಲಿ ಪೃಥ್ವಿಯಲ್ಲಿ ಆಚರಣೆ ವಧು ವರರ ಸಮಾವೇಶ ಸಂಭ್ರ ಮಿಸಬೇಕು ಮದುವೆ ಆಗುವ ತನಕ ನಿರಂತರ ಪ್ರಯತ್ನ ಮಾಡಬೇಕು ಮದುವೆ ಆಗುವವರೆಗೆ ತಾಳ್ಮೆ ಇರಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ 500 ಕ್ಕೂ ಹೆಚ್ಚು ವದು ವರರು ಹಾಗೂ ಪಾಲಕರು ಉಪಸ್ಥಿತಿತರಿದ್ದರು. ಈ ಕಾರ್ಯಕ್ರಮವನ್ನು ಸುರೇಶ ಕುಪ್ಪಸಗೌಡರ ಸಂಯೋಜನೆ ಮಾಡಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





