ನಮಸ್ತೆ ಕರ್ನಾಟಕ……14/7/2023 ರಂದು ಈಗ ಸಮಯ ರಾತ್ರಿ 21 ಗಂಟೆ 20 ನಿಮಿಷ 54 ಸೆಕೆಂಡ್ ಠಾಣೆಗೆ ಸಾಹೇಬ್ರ ಎಂಟ್ರಿ…ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಪೆಟ್ರೋಲಿಂಗ್ ಹೋಗಿರುವುದು ಸುಳ್ಳು, ಯಾಕೆಂದರೆ ಅವರು ಠಾಣೆಯ ಸ್ಟೇಷನ್ ನಲ್ಲಿಯೇ ಇದ್ದಾರೆ. ಸಿಬ್ಬಂದಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದು ಸುಳ್ಳು. ಈಗ ಸಮಯ 21 ಗಂಟೆ 45 ನಿಮಿಷ ಸ್ಟೇಷನ್ ನಲ್ಲಿ ಇದ್ದುಕೊಂಡೆ ಕಂಪ್ಲೇಟ್ ನೀಡಿರುತ್ತಾರೆ. ಸಮಯ 22ಗಂಟೆ 16 ಸೆಕೆಂಡ್ ಈಗಲೂ ಪೊಲೀಸ್ ಸಿಬ್ಬಂದಿ ಇನ್ಸ್ಪೆಕ್ಟರ್ ಠಾಣೆಯಲ್ಲಿಯೇ ಇರುತ್ತಾರೆ ಆದರೂ ದಾಳಿಗೆ ಹೋಗಿದೀನಿ ಎಂದು ಸುಳ್ಳು ಹೇಳುತ್ತಾರೆ. ಎಚ್ ಸಿ 17-84 ಎಸ್ ಎ ಚೋಪದಾರ 2 ಜನ ಪಂಚರನ್ನು ಕರೆದುಕೊಂಡು ಬಂದು
PSI ಮುಂದೆ ಹಾಜರುಪಡಿಸಿದ್ದೆನೆ ಎಂದು ಸುಳ್ಳು ಹೇಳಿರುತ್ತಾರೆ. ಯಾಕೆಂದರೆ ಅವರು 21 ಗಂಟೆಯಿಂದ ಠಾಣೆಯಲ್ಲಿ ಉಳಿದಿರಿತ್ತಾರೆ.PSI ವಿಶ್ವನಾಥ ಆಲಮಟ್ಟಿ ಅವರು PI, ಸಿಬ್ಬಂದಿ ಹಾಗೂ ಪಂಚರನ್ನು ಕರೆದುಕೊಂಡು 22-16ಕ್ಕೆ ದಾಳಿಗೆ ಹೋಗಿರುತ್ತೇನೆ ಎಂದಿರುವುದು ಸುಳ್ಳು ಯಾಕೆಂದರೆ 21 ಗಂಟೆಯಿಂದ 23 ಗಂಟೆಯವರೆಗೆ PSI ಅವರು ಠಾಣೆಯಲ್ಲಿಯೇ ಇರುತ್ತಾರೆ.ವಶಪಡಿಸಿಕೊಂಡ ಮಾಲು 5700ರೂ,6 OC 1ಚೀಟಿ,1 ಪೆನ್ನು ವಶಪಡಿಸಿಕೊಂಡಿರುವುದು ಸುಳ್ಳು ಯಾಕೆಂದರೆ ಅಲ್ಲಿ ಯಾರು ಹೋಗಿರುವುದಿಲ್ಲ. ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದಿರುವುದಿಲ್ಲ. ಆರೋಪಿಗಳನ್ನು ಠಾಣೆಗೆ ಕರೆ ತರದೇ ಆರೋಪಿಗಳಿಗೆ ಜಾಮೀನು ನೀಡಿರುತ್ತಾರೆ. ಆರೋಪಿಗೆ ಜಾಮೀನು ನೀಡಲು ಜಾಮೀನು ದಾರನೇ ಬಂದಿರುವುದಿಲ್ಲ.PSI ವಿಶ್ವಾನಾಥ ಆಲಮಟ್ಟಿ ಸುಳ್ಳು ಪ್ರಕರಣ ದಾಖಲಿಸಿಕೊಂಡು ಸುಳ್ಳು ದಾಳಿ ಸೃಷ್ಟಿಸಿ ಅದಕ್ಕೆ ಸುಳ್ಳು ಪಂಚಾನಾಮಿಯನ್ನು ಬರೆಯಿಸಿ.ಆರೋಪಿ ಮತ್ತು ಜಾಮೀನುದಾರರನ್ನು ಠಾಣೆಗೆ ಕರೆ ತರದೆ ಜಾಮೀನು ನೀಡಿರುತ್ತಾರೆ. ಹಾಗೆಯೇ ಸುಳ್ಳು ಸಾಕ್ಷಿಯನ್ನು ಸೃಷ್ಟಿಸಿ ಚಾರ್ ಶೀಟ್ ಕೋರ್ಟ್ ಗೆ ಸಲ್ಲಿಸಿರುತ್ತಾರೆ. ಸುಲೇಮಾನ ಚೋಪದಾರ, ಆರ್ ಎಸ್ ರಾಟೋಡ, ಪಿ ಬಿ ಮುರಾಳ
https://fb.watch/n1yGnnVxrY/?mibextid=97WSwf
ಇವರು ಸುಳ್ಳು ಸಾಕ್ಷಿ ಹೇಳಿರುತ್ತಾರೆ. ಇಂಥ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯಿಂದ ನಾಗರಿಕ ಸಮಾಜಕ್ಕೆ ಯಾವ ರೀತಿ ನ್ಯಾಯ ಸಿಗಲು ಸಾಧ್ಯ. ಈ ಹಿಂದೆನು ಸುದ್ದಿ ಪ್ರಸಾರ ಮಾಡಿದೀವಿ ಆದರೆ ಇದಕ್ಕೆ ಸಂಬಂಧ ಪಟ್ಟ ಮೇಲಾಧಿಕಾರಿಗಳು ಯಾವುದೇ ರೀತಿ ಸಂಬಂಧ ವಿಲ್ಲದ ವರ್ತನೆ ತೋರುತ್ತಿರೋದಾದರು ಯಾಕೆ…? ಇಂಥವರ ಮೇಲೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳುತ್ತಾರಾ ಅಥವಾ ಇವರು ಮಾಡುವ ಘನಂಧಾರಿ ಕೆಲಸಗಳಿಗೆ ಸಾಥ್ ನೀಡುತ್ತಾರಾ…? ಕಾದು ನೋಡೋಣ……!ಸಮಯ 23ಗಂಟೆ 5ನಿಮಿಷ 13 ಸೆಕೆಂಡ್ ಗೆ ಸಾಹೇಬರು ಠಾಣೆಯಿಂದ ಹೊರಗೆ ಹೋಗಿರುತ್ತಾರೆ. ಆದರೆ ಇವರು ಮನೆಗೇ ಹೋಗಿರುತ್ತಾರೆ ವಿನಃ ಯಾವುದೇ ರೆಡ್ ಮಾಡಲು ಹೋಗಿಲ್ಲ, ಯಾಕೆಂದರೆ ಕ್ಯಾಮರಾ ದ್ರಶ್ಯಾವಳಿಗಳು ಹೇಳ್ತಿರೋದೇ ಬೇರೆ ಸ್ಟೇಷನ್ ನಲ್ಲಿ ನಡದಿದ್ದೆ ಬೇರೆ…. ಇದನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸಲಿರೋದು ನಿಮ್ಮ ಸ್ಫೋಟಕ ಸುದ್ದಿ ವಾಹಿನಿ ಬಿಗ್ ಟಿವಿ ನ್ಯೂಸ್…..
bigtvnews | Hubli Dharwad News | Kannada News | Karnataka News Hubli News | News In Hubli | Local news

