Breaking News

ಚಿತ್ರದುರ್ಗ

ಮರ್ಯಾದೆಗೆ ಅಂಜಿ ಪತಿ-ಪತ್ನಿ ಆತ್ಮಹತ್ಯೆ ಯತ್ನ

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೊ ವೈರಲ್ ಮಾಡಿದ್ದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಪತಿ-ಪತ್ನಿ ಆತ್ಮಹತ್ಯೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊಂಡಾಪುರದಲ್ಲಿ ನಡೆದಿದೆ. ಪತಿ ಮೈಲಾರಪ್ಪ ಸಾವನ್ನಪ್ಪಿದು, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪತಿ ಮೈಲಾರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಪತ್ನಿ ಸರೋಜಾ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ದಾಖಲು ಮಾಡಿ …

Read More »

ರಸ್ತೆ ಮಧ್ಯ ಗೂಳಿ ಕಾಳಗ.

ಕೋಟೆ ನಾಡು ಚಿತ್ರದುರ್ಗದ ಹೊರವಲಯದ ಬಡಾವಣೆಯಲ್ಲಿ ಎರಡು ಮದಿಸಿದ ಗೂಳಿಗಳು ಕಾಳಗ ಮಾಡಿದ್ದು ನೋಡುಗರ ಮನಸ್ಸನ್ನು ಸೂರೆಗೊಂಡಿತು.ಸುಮಾರು ಎರಡು ನಿಮಿಷ ಕಾಳಗ ಮಾಡಿದವು.ಗೂಳಿ ಕಾಳಗದಲ್ಲಿ ಗೆದಿದ್ದು ಯಾವುದು ಸೋತಿದ್ದು ಯಾವುದು ಅಂತಾ ಕೊನೆಗೂ ತಿಳಿಲಿಲ್ಲ. ಆದ್ರೇ ನೆರೆದಿದ್ದ ಜನರು ರೊಮಂಚಕರ ದೃಷ್ಯವನ್ನು ಸವಿದರು.

Read More »

ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ನಿನ್ನೆ ಬೈಕ್ ಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ದಂಪತಿ ಸೇರಿ 3ಜನ ದುರ್ಮರಣ ಹೊಂದಿದ್ದರು. ಚಿತ್ರದರ್ಗ ಜಿಲ್ಲೆಯ ಹಿರೆಗುಂಟನೂರು ಗ್ರಾಮದ ಬಳಿ ಅಪಘಾತಸಂಭವಿಸಿತ್ತು. ಮೈನ್ಸ್ ತುಂಬಿದ ಲಾರಿ ಹರಿದ ಕಾರಣ ಮಾಂತೇಶ್ ನಾಯ್ಕ್ (30), ಪತ್ನಿ ದೀಪಾಬಾಯಿ (23), ಚೇತನ್ (10).ಮೃತ ಪಟ್ಟಿದ್ದರು. ಅಪಘಾತ ಹಿನ್ನೆಲೆಯಲ್ಲಿ ಮೃತರ ಕುಟುಂಬಕ್ಕೆ ಪರಿಹಾರ ಮತ್ತು ಸರಕಾರಿ ನೌಕರಿ ನೀಡಲು ಓತ್ತಾಯಿಸಿ ಇಂದು ಭೀಮಸಮುದ್ರ ಲಂಭಾಣಿ ಹಟ್ಟಿ ಗ್ರಾಮ ನಿವಾಸಿಗಳು ಮತ್ತು ಸಂಬಂದಿಕರಿಂದ ಜಿಲ್ಲಾಧಿಕಾರಿಯ …

Read More »

ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ

ಭಾರೀ ವಂಚನೆ ಮಾಡಿದ ಐಎಂಎ ಜ್ಯುವೆಲ್ಲರಿ ಮಾಲೀಕ ಮನ್ಸೂರ್ ನ ನೆರಳು ಚಿತ್ರದುರ್ಗಕ್ಕೂ ಹರಡಿದೆ. ಐಎಂಐ ವಂಚನ ಜಾಲಕ್ಕೆ ಸಿಲುಕಿ ನೂರಾರು ಜನರು ಈಗ ಎಚ್ಚೆತ್ತು ಬೀದಿಗೆ ಬಂದು ಹೇಳಿಕೆ ನೀಡುತ್ತಿದ್ದಾರೆ. ಪ್ರಮುಖವಾಇ ಬೆಂಗಳೂರು ಅಷ್ಟೇ ಅಲ್ಲದೇ ಕೋಟೆನಾಡಿನ ಸುಮಾರು 150ಕ್ಕೂ ಹೆಚ್ಚು ಜನ ಹೂಡಿಕೆ ಮಾಡಿದ್ದಾರೆ. ಏಜೆಂಟ್ ನೂರುಲ್ಲಾ ಮುಖಾಂತ್ರ ಹಣವನ್ನು ಬ್ಯಾಂಕ್ ಮುಖಾಂತ್ರ ನೆಫ್ಟ್ ಮಾಡಿದ್ದಾರೆ. ಅತೀ ಹೆಚ್ಚಿನ ಮಹಿಳೆಯರೇ ಹೂಡಿಕೆ ಮಾಡಿದ್ದಾರೆ. ಅಷ್ಟಕ್ಕೂ ವಂಚನೆಯ ಬಗ್ಗೆ …

Read More »

ಬಯಲು ಸೀಮೆಯ ಊಟಿ ಜೋಗಿಮಟ್ಡಿಯಲ್ಲಿ ಬೆಂಕಿ.

ಚಿತ್ರದುರ್ಗ ಬಯಲು ಸೀಮೆಯ ಊಟಿ ಜೋಗಿಮಟ್ಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಚಿತ್ರದುರ್ಗದ ಹೊರ ವಲಯದಲ್ಲಿರುವ ಜೋಗಿ ಮಟ್ಟಿ ವನ್ಯಧಾಮದಲ್ಲಿ ಸತತ ಒಂದು ಗಂಟೆಯಿಂದ ಹೊತ್ತಿ ಉರಿತ್ತಿರುವ ಬೆಂಕಿಯನ್ನು ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಮಿನಿ ಊಟಿ ಎಂದೆ ಖ್ಯಾತಿಯ ಜೋಗಿ ಮಟ್ಟಿ ವನ್ಯಧಾಮವಿದಾಗಿದ್ದು, ಯಾರೋ ಕಿಡುಗೇಡಿಗಳಿಂದ ಬೆಂಕಿ ಹಚ್ಚಿ ಕೃತ್ಯ ನಡೆದಿದೆ ಎಂದು ಸಂಶಯ ವ್ಯಕ್ತವಾಗಿದೆ. ಸದ್ಯ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿದ್ದಾರೆ.

Read More »

ಚಿತ್ರದುರ್ಗದ ಹಲವೆಡೆ ತಡ ರಾತ್ರಿ ಸುರಿದ ದಾರಾಕಾರ ಮಳೆ.

ಕಳೆದ ಹಲವು ವರ್ಷಗಳಿಂದಲ್ಲೂ ಮಳೆಯಿಲ್ಲದೆ ಕಂಗಲಾಗಿದ್ದ ರೈತನ ಬಾಳಿಗೆ ವರುಣ ತಂಪೇರೆಯುವ ಮೂಲಕ ಬೆಳಕು ಚೆಲ್ಲಿದ್ದಾನೆ. ಕಳೆದ ತಡರಾತ್ರಿ ಸುರಿದ ಭಾರಿ ಮಳೆಯೀಂದಾಗಿ ಚಿತ್ರದುರ್ಗದ ಹಲವು ಭಾಗಗಳಲ್ಲಿ ಭೂಮಿ ತಂಪಾಗಿದ್ದು, ರೈತರು ಬೆಳೆ ಬೆಳೆಯುವುದಕ್ಕೆ ಮುಂದಾಗಿದ್ದಾರೆ. ಹಾಗೂ ಅಲ್ಲಲ್ಲಿ ಸಂಪೂರ್ಣ ಬತ್ತಿ ಹೋಗಿದ್ದ ಭಾವಿಯಲ್ಲಿನೀರು ಸಹ ಹರಿದು ಬರುತ್ತಿದೆ. ಕಡವಿಗೆರೆ ಗ್ರಾಮದ ಭಾವಿಯಲ್ಲಿ ಅಂತರ್ಜಲ ಬರುವುದನ್ನು ನೋಡುವುದಕ್ಕೆ ಗ್ರಾಮಸ್ಥರು ಮುಗಿ ಬಿದಿದ್ದು, ಎಲ್ಲರ ಮುಖದಲ್ಲಿ ಮಂದಹಾಸ ಮೂಡಿದೆ.

Read More »

ತ್ರಿಭಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ

ತ್ರಿಬಾಷಾ ನೀತಿಗೆ ಕುಂ.ವೀರಭದ್ರಪ್ಪ ವಿರೋಧ ವ್ಯಕ್ತಪಡಿಸಿದರು. ಚಿತ್ರದುರ್ಗದಲ್ಲಿ ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ನಮ್ಮ ಜೀವನ ಕನ್ನಡ ಭಾಷೆ ಮೇಲೆ ಅವಲಂಬಿಸಿದೆ. ಹಾಗಾಗಿ ಕನ್ನಡ ರಕ್ಷಿಸಿ ಹಿಂದಿ ವಿರೋಧಿಸಿ ಎಂದರು. ಹಿಂದಿ ಯಾವುದೇ ಕಾರಣಕ್ಕೂ ನಮ್ಮ ಗಡಿ ದಾಟದಂತೆ ನೋಡಿಕೊಳ್ಳಬೇಕು. ನಮ್ಮ ಕೆಂಪು-ಬಿಳಿ ರಕ್ತ ಕಣಗಳನ್ನ ಇನ್ನೊಂದು ಭಾಷೆ ಆಕ್ರಮಿಸದಂತೆ ನೋಡಿಕೊಳ್ಳಬೇಕು. ಹಿಂದಿ ಸಾಹಿತ್ಯವನ್ನ ನಾವು ಓದಿದ್ದೇವೆ. ಕನ್ನಡ ನಾಶವಾದರೆ ನಮ್ಮ ಜೀವನ ನಾಶವಾಗುತ್ತದೆ. …

Read More »

ಕೋಟೆನಾಡಿನಲ್ಲಿ ಯುವಕನ ಮೇಲೆ ಬ್ಲೇಡ್ ದಾಳಿ

ಕೋಟೆ ನಾಡು ಚಿತ್ರದುರ್ಗದಲ್ಲಿ ದುಶ್ಚಟ ವ್ಯಸನಿಗಳ ಕಾಟ ಹೆಚ್ಚಾಗಿದ್ದು, ಪುಂಡರ ಬ್ಲೇಡ್ ದಾಳಿಗೆ ಸಿಲುಕಿ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಚಿತ್ರದುರ್ಗದ ಜೆಸಿಆರ್ ಬಡಾವಣೆಯಲ್ಲಿ ಸಲ್ಯೂಷನ್ ವ್ಯಸನಿಗಳ ಆರು ಮಂದಿ ತಂಡ ಬಡೇಮಕಾನ್ ನಿವಾಸಿ ಕರೀಂ ಎಂಬ ಯುವಕನ ಮೇಲೆ ಬ್ಲೇಡ್ ನಿಂದ ದಾಳಿಮಾಡಿ, ಮೂರು ಸಾವಿರ ರೂಪಾಯಿ ನಗದು ಹಾಗು ಮೊಬೈಲ್ ಫೋನ್ ಕಸಿದುಕೊಂಡು ಪರಾರಿಯಾಗಿದ್ದಾರೆ. ದುಶ್ಚಟ ವ್ಯಸನಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿರುವ ಯುವಕ ಕರೀಂ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ …

Read More »