ಹುಬ್ಬಳ್ಳಿ: ಹುಬ್ಬಳ್ಳಿಯ ಉಣಕಲ್ನ ಆರ್.ಕೆ.ಕೊಕಾಟಿ ಹೈಸ್ಕೂಲ್ ಶಾಲೆಯಲ್ಲಿ, 1996ರಿಂದ 2003ರ ವರೆಗೆ ಎಸ್ಎಸ್ಎಲ್ಸಿ ಕಲಿತ ವಿದ್ಯಾರ್ಥಿಗಳು, ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಆಯೋಜಿಸಿ ತಮಗೆ ಕಲಿಸಿದ ಗುರುಗಳಿಗೆ ಸತ್ಕರಿಸಿದರು. ಭವಿಷ್ಯಕ್ಕೆ ಅಡಿಪಾಯ ಹಾಕಿದ ಶಿಕ್ಷಕರ ಕಾರ್ಯವನ್ನು ವಿದ್ಯಾರ್ಥಿಗಳು ನೆನೆದರು.
ಗುರು-ಶಿಷ್ಯರು ಒಂದು ಕಡೆ ಸೇರಿ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಅಲ್ಲದೇ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿ ಸಂತಸಪಟ್ಟರು. ಈ ಬಗ್ಗೆ ಕಲಿಸಿದ ಗುರುಗಳು ಏನು ಹೇಳಿದ್ದಾರೆ ಕೇಳಿ ಎಂದರು. ಹಳೆ ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

