ಹುಬ್ಬಳ್ಳಿ : ಮಾಜಿ ಸಿಎಂ ಅಶ್ಲೀಲ ಸಿಡಿ ಬರತ್ತೆ ಅನ್ನೋ ವಿಚಾರವೂ ಇದು ಬ್ಲ್ಯಾಕ್ ಮೇಲ್ ತಂತ್ರ. ಇದಕ್ಕೆಲ್ಲ ರಿಯಾಕ್ಷನ್ ಕೊಡೋ ಅಗತ್ಯ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ಇದು ಅರ್ಥವಿಲ್ಲದ ಮಾತು. ವಿಡಿಯೋ ಇದ್ರೆ ಕಂಪ್ಲೆಂಟ್ ಕೊಡಬೇಕು ಇಲ್ಲವಾದ್ರೆ ರಿಲೀಸ್ ಆದ್ರು ಮಾಡಬೇಕು. ಬಿಜೆಪಿದವರು ಹೋರಾಟ ಮಾಡ್ತಿರೋದಕ್ಕೆ ಈ ರೀತಿ ಬ್ಲ್ಯಾಕ್ ಮೇಲ್ ತಂತ್ರ ಮಾಡ್ತಿದ್ದಾರೆ. ಯಾವ ಮುಖ್ಯಮಂತ್ರಿ, ಯಾವ ಮಾಜಿ ಮುಖ್ಯಮಂತ್ರಿ ಯಾರು ಅಷ್ಟೊದನ್ನ ಹೇಳಬೇಕು. ಇದಕ್ಕೆ ಏನು ಅರ್ಥ ಇಲ್ಲಾ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

