ಹುಬ್ಬಳ್ಳಿ: ಪ್ರಮೋದ್ ಮುತಾಲಿಕ್ಗೆ ಬೆಂಕಿ ಹಚ್ಚೇದನ್ನ ಬಿಟ್ಟರೆ ಏನೂ ಗೊತ್ತಿಲ್ಲ. ಅವನ ತಾಕತ್ತು ನಾನು ನೋಡಿದ್ದೇನೆ. ಅವನು ಹೇಳಿದ್ದಕ್ಕೆ ನಾನು ಉತ್ತರ ಕೊಡಬೇಕಿಲ್ಲ. ನನ್ನನ್ನು ಜನರು ಆರಿಸಿ ತಂದಿದ್ದಾರೆ ಅವನಲ್ಲ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ಗೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮಂಟೂರ ರೋಡ್ನ ರುಧ್ರಭೂಮಿಯಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಿರುವ ವಿಚಾರವಾಗಿ ಮಾತನಾಡಿದ್ದ ಪ್ರಮೋದ್ ಮುತಾಲಿಕ್, ಪ್ರಸಾದ್ ಅಬ್ಬಯ್ಯ ಅವರಿಗೆ ಕಬರಸ್ತಾನದಲ್ಲಿ ಇಂದಿರಾ ಕ್ಯಾಂಟೀನ್ ಕಟ್ಟಲಿ ಎಂದಿದ್ದರು. ಇದಕ್ಕೆ ಮಾಧ್ಯಮಗೋಷ್ಠಿ ಪ್ರತಿಕ್ರಿಯೆ ನೀಡಿದ ಶಾಸಕ ಅಬ್ಬಯ್ಯ ಅವರು, ಪ್ರಮೋದ ಮುತಾಲಿಕ್ ಅಂತಾರಾಷ್ಟ್ರೀಯ ನಾಯಕನೇನು ಅಲ್ಲಾ. ಆತ ನನ್ನನ್ನ ಆರಿಸಿ ತಂದಿಲ್ಲ, ಜನ ತಂದಿದ್ದಾರೆ. ಅವರಿಗಾಗಿ ನಾನು ಕೆಲಸ ಮಾಡ್ತಾ ಇದ್ದೇನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

