ಅಣ್ಣಿಗೇರಿ: ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಜಿಲ್ಲಾ ಸಮಿತಿಯಿಂದ ಅಣ್ಣಿಗೇರಿ ತಾಲೂಕು ಸಮಿತಿಯ ಪುನರ್ ಆಯ್ಕೆ ಮಾಡುವ ಕಾರ್ಯಕ್ರಮ ನೆರವೇರಿತು.ಜಿಲ್ಲಾ ಅಧ್ಯಕ್ಷರಾದ ಸಿದ್ದಾರ್ಥ್ ಮಲ್ಲಮ್ಮನವರ ಅವರು ಸಭೆಯ ನೇಮನಸಾರವಾಗಿ ಪದಾಧಿಕಾರಿಗಳನ್ನು ಪುನರಾಯ್ಕೆ ಮಾಡಿದರು.
ಅಣ್ಣಿಗೇರಿ ತಾಲೂಕು ಅಧ್ಯಕ್ಷರಾಗಿ ರಾಘವೇಂದ್ರ ರಾಮಗಿರಿ,ಉಪಾಧ್ಯಕ್ಷರಾಗಿ ರಾಘು ಅಬ್ಬಿಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜು ಹಳ್ಳಿಕೇರಿ, ಖಜಾಂಚಿಯಾಗಿ ರಾಜು ಕಲ್ಲೋಡ್ಡರ ಆಯ್ಕೆಯಾದರು.
ಈ ವೇಳೆ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಆರ್ ಖಾನಾಪುರ, ಶಾಂತರಾಜ್ ಬಿಟಿ, ಸುರೇಶ್ ಸುರೇಶ್ ಹುಣಸಿಮರದ, ಸಾಧಿಕ್ ಠಾಣೆದ್, ಮಾರುತಿ ಮರಡ್ಡಿ, ಧರ್ಮರಾಜ್ ಹರಣಶಿಕಾರಿ,ಶಿವಕ್ಕ ಪೂಜಾರ ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





