ಚಿತ್ರದುರ್ಗದ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಜಗಳೂರು ಮೂಲದ ಮನೋಜ್ ಕುಮಾರ್, ಶಿರಾ ಮೂಲದ ಯುವತಿ ಮದುವೆ ನಿಶ್ಚಯಾಗಿತ್ತು. ರಾತ್ರಿ ವರನ ಕಡೆಯವರಿಗೆ ವಧು ಕಡೆಯವರು ಕುಡಿಯಲು ನೀರು ಕೊಡದೆಯಿರುವ ವಿಚಾರಕ್ಕೆ ಕಿರಿಕ್ ಆಗಿದ್ಯಂತೆ.ಈ ವಿಚಾರವಾಗಿ ಎರಡು ಕಡೆಯವರ ನಡುವೆ ಜಗಳ ಜೋರಾಗಿ ಮನಸ್ತಾಪ ಏರ್ಪಟ್ಟಿದೆ.ಇದೇ ನೆಪವೊಡ್ಡಿ ಮದುವೆಗೆ ವಧು ನಿರಾಕರರಿಸುವುದಾಗಿ ತಿಳಿದುಬಂದಿದೆ.ಮದುವೆಗೆ ಒಪ್ಪುವಂತೆ ವರನ ಕಡೆಯವರು ಕೇಳಿಕೊಂಡರೂ ಒಪ್ಪಲಿಲ್ಲ. ವರ ಮನೋಜ್ಕುಮಾರ್ ಮತ್ತು ವಧು ಅನಿತಾ ಬೆಂಗಳೂರಿನ ಖಾಸಗಿ ಸಾಫ್ಟ್ವೇರ್ ಕಂಪನಿಯಲ್ಲಿ ಎಂಜಿನಿಯರ್ಗಳಾಗಿ ಕೆಲಸ ಮಾಡುತ್ತಿದ್ದಾರೆ. ಪರಸ್ಪರ ಒಪ್ಪಿ ಮದುವೆಗೆ ಮುಂದಾಗಿದ್ದರು. ಆದರೆ ಕ್ಷುಲ್ಲಕ ಕಾರಣಕ್ಕೆ ಮದುವೆ ನಿಂತ ಕಾರಣ ಎರಡೂ ಕಡೆಯವರು ನಿರಾಶೆಯಿಂದ ಮರಳಿದರು.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

