ಅಗರ್ವಾಲ್ ಆತ್ಮಹತ್ಯೆಗೆ ಎರಡು ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ಗಳನ್ನು ಸಜ್ಜುಗೊಳಿಸಿದ್ದರು, ಅವುಗಳನ್ನು ತಮ್ಮ ತೋಳುಗಳಿಗೆ ಜೋಡಿಸಿ ಹೆಲ್ಮೆಟ್ ಧರಿಸಿದ್ದರು. ಸಿಲಿಂಡರ್ಗೆ ಜೋಡಿಸಲಾದ ಟ್ಯೂಬ್ನಲ್ಲಿ ನೆಬ್ಯುಲೈಜರ್ ಅಳವಡಿಸಲಾಗಿತ್ತು. ಅದರ ಮೂಲಕ ಅವರು ಕಾರ್ಬನ್ ಮಾನಾಕ್ಸೈಡ್ ಉಸಿರಾಡಿದ್ದರು. ಇದರಿಂದಾಗಿ ಅವರು ಸಾವನ್ನಪ್ಪಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.ಅಪಾಯವನ್ನು ಗುರುತಿಸಿದ ನೈಗಾಂವ್ ಪೊಲೀಸರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ವೈಯಕ್ತಿಕ ರಕ್ಷಣಾ ಸಾಧನಗಳು (ಪಿಪಿಇ) ಮತ್ತು ಉಸಿರಾಟದ ಉಪಕರಣಗಳನ್ನು ಹೊಂದಿದ್ದ ಅಗ್ನಿಶಾಮಕ ದಳದವರು ಹೈಡ್ರಾಲಿಕ್ ಸ್ಪ್ರೆಡರ್ ಕಟ್ಟರ್ ಬಳಸಿ ಆತನ ರೂಂ ಒಳಗೆ ಹೋದಾಗ ಆತ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿತು. ಮೃತ ವ್ಯಕ್ತಿಯ ದೇಹವನ್ನು ಕಮನ್ ಪ್ರದೇಶದ ಆತನ ಬಾಡಿಗೆ ಮನೆಯಿಂದ ವಶಕ್ಕೆ ಪಡೆಯಲಾಗಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

