ಮಹಾರಾಷ್ಟ್ರದ ಸಾಂಗ್ಲಿ ನಗರದಲ್ಲಿ ಬೆಳಗಾವಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿಗೆ ತಂಪು ಪಾನೀಯದಲ್ಲಿ ಮತ್ತು ಬರುವ ಮಾತ್ರೆ ನೀಡಿ ಮೂವರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದೆ.ಸೊಲ್ಲಾಪುರದ ವಿನಯ ವಿಶ್ವೇಶ ಪಾಟೀಲ(22, ಪುಣೆಯ ಸರ್ವಜ್ಞ ಸಂತೋಷ ಗಾಯಕವಾಡ (20) ಹಾಗೂ ಸಾಂಗಲಿಯ ತನ್ಮಯ ಸುಕುಮಾರ ಪೆಡ್ನೇಕರ (30) ಎಂಬಾತರನ್ನು ಬಂಧಿಸಲಾಗಿದೆ.ಯುವತಿಗೆ ತಂಪು ಪಾನೀಯಲ್ಲಿ ಮತ್ತು ಬರುವ ಮಾತ್ರೆ ಕೊಟ್ಟು ಕುಡಿಸಿದ್ದಾರೆ. ನಂತರ ಮೂವರು ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಸ್ವಲ್ಪ ಸಮಯದ ನಂತರ, ಯುವತಿಗೆ ಪ್ರಜ್ಞೆ ಬಂದು ಬಳಿಕ ಮಧ್ಯರಾತ್ರಿ ಸಮೀಪದ ವಿಶ್ರಾಮಬಾಗ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾಳೆ.ಸಾಂಗ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಿತು ಖೋಖರ್ ಮತ್ತು ವಿಶ್ರಾಮಬಾಗ್ ಇನ್ಸ್ಪೆಕ್ಟರ್ ಸುಧೀರ ಭಾಲೇರಾವ್ ದೂರು ದಾಖಲಿಸಿಕೊಂಡಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

