ಭವಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಚಿನ್ನದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ ಐವರು ನಕಲಿ ಬಾಬಾಗಳನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಈ ಐವರೂ ದುಷ್ಕರ್ಮಿಗಳು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದ್ದು, ಸಾಧುಗಳ ವೇಷ ಧರಿಸಿ ಇದೇ ರೀತಿ ಕೃತ್ಯವನ್ನೆಸಗುತ್ತಿದ್ದರೆಂದು ತಿಳಿದು ಬಂದಿದೆ.ಕಮಲನಾಥ್ ,ಸಂತೋಷ ನಾಥ್, ಚೈನ್ ನಾಥ್ ಚೌಹಾಣ್, ಶ್ರವಣ್ ಜೋಗಿ ಮತ್ತು ಟೋನಿಯಾ ಬಂಧಿತ ಆರೋಪಿಗಳು.ಸಾಧುಗಳಂತೆ ವೇಷ ಧರಿಸಿ ವಂಚಿಸುತ್ತಿದ್ದು, ಟೋನಿಯಾ ಇವರ ಕಾರು ಚಾಲಕನಾಗಿದ್ದ ಎಂದು ತಿಳಿದುಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

