ಬಿಗ್ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್ ಅರೆಸ್ಟ್ ಮಾಡಲಾಗಿದೆ. ಕೊರಳಿಗೆ ಹುಲಿ ಉಗುರಿನ ಡಾಲರ್ ಹಾಕೊಂಡಿದ್ದ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ್ಲೇ ಅರೆಸ್ಟ್ ಮಾಡಿದ್ದಾರೆ ಅರಣ್ಯಾಧಿಕಾರಿಗಳು. ಇದೀಗ 14 ದಿವಸ ಜೈಲಿಗೂ ಹಾಕಲಾಗಿದೆ. ಆದರೆ, ಸಂತೋಷ್ ಕೊರಳಿನಲ್ಲಿದ್ದದ್ದು ಹುಲಿ ಉಗುರು ಅಂತಾ ನಮಗೂ ಗೊತ್ತಿರಲಿಲ್ಲ ಅಂತಿದ್ದಾರೆ ಕುಟುಂಬಸ್ಥರು.
ಇನ್ನು ಪ್ರಕರಣದ ಸಂಬಂಧ ಬಿಗ್ ಬಾಸ್ ಮನೆಯಿಂದಲೇ ವರ್ತೂರ್ ಸಂತೋಷ್ ಅನ್ನು ಅರೆಸ್ಟ್ ಮಾಡಿದ್ದು, ಬಿಗ್ ಬಾಸ್ ನೋಡುಗರಲ್ಲಿ ಮತ್ತೆ ವರ್ತೂರ್ ಸಂತೋಷ್ ಬಿಗ್ ಬಾಸ್ಗೆ ಬರ್ತಾರ ಎಂಬ ಗೊಂದಲ ಮೂಡಿದೆ.ಇನ್ನು ಪ್ರಕರಣದ ಬಗ್ಗೆ ಬಿಗ್ಬಾಸ್ ವಿನ್ನರ್ ಪ್ರಥಮ್ ಮಾತಾಡಿದ್ದು, ವರ್ತೂರ್ ಸಂತೋಷ್ ಮತ್ತೆ ಬಿಗ್ ಬಾಸ್ಗೆ ಬರ್ತಾರ ಎಂಬ ಪ್ರಶ್ನೆ ಸ್ಪಷ್ಟನೆ ನೀಡಿದ್ದಾರೆ.
ಬಿಗ್ಬಾಸ್ ವಿನ್ನರ್ ಪ್ರಥಮ್ ಏನಂದ್ರು? ಈ ಪ್ರಕರಣದ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಬಿಗ್ ಬಾಸ್ ವಿನ್ನರ್ ಫ್ರಥಮ್. ಈ ಪ್ರಕರಣದಲ್ಲಿ ನಾನು ಸಂತೋಷ್ ಅವರ ಬಂಧನ ಆಗಿದ್ದಾರೆ ಅಂತ ಹೇಳಲ್ಲ. ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಅಂತೀನಿ.
bigtvnews | Hubli Dharwad News | Kannada News | Karnataka News Hubli News | News In Hubli | Local news





