Breaking News

ಶಿರಡಿ ಪಾದಯಾತ್ರಿಗಳಿಗೆ ವಾಹನ ಢಿಕ್ಕಿ: ಓರ್ವ ಸಾವು

ಮುಂಬಯಿ ನಾಸಿಕ್ ಹೆದ್ದಾರಿಯ ಶಹಾಪುರ ತಾಲೂಕಿನ ವಾಫೆ ಗ್ರಾಮದ ಬಳಿ ಶಿರಡಿಗೆ ತೆರಳುತ್ತಿದ್ದ ಸಾಯಿಬಾಬಾ ಪಲ್ಲಕಿ ಯಾತ್ರಾರ್ಥಿಗಳ ಮೇಲೆ ಅಪರಿಚಿತ ವಾಹನವೊಂದು ಚಲಿಸಿದ ಪರಿಣಾಮ ಯುವಕನೋರ್ವ ಮೃತಪಟ್ಟು, ಇನ್ನೊಬ್ಬ ಗಾಯಗೊಂಡ ಘಟನೆ ಗುರುವಾರ ನಡೆದಿದೆ.ನ. 25ರಂದು ವಿರಾರ್‌ನಿಂದ ಯಾತ್ರಾರ್ಥಿಗಳ ತಂಡವೊಂದು ಸಾಯಿಬಾಬಾ ಪಲ್ಲಕಿಯೊಂದಿಗೆ ಶಿರಡಿಗೆ ಪಾದಯಾತ್ರೆ ಆರಂಭಿಸಿತ್ತು. ಗುರುವಾರ ಈ ತಂಡವು ಹೆದ್ದಾರಿಯಲ್ಲಿ ಶಿಸ್ತುಬದ್ಧವಾಗಿ ಸಾಗುತ್ತಿದ್ದಾಗ, ವೇಗವಾಗಿ ಬಂದ ವಾಹನವೊಂದು ಇಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿದೆ. ವಾಹನವನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share News

About BigTv News

Check Also

80s ಫೋಟೋ ಟ್ರೆಂಡ್‌ನಲ್ಲೂ ಸೈಬರ್ ವಂಚಕರ ಕನ್ನ: ಹಣ ಕೊಡದಿದ್ದಕ್ಕೆ ಬೆತ್ತಲೆ ಫೋಟೋ ಹರಿಬಿಟ್ಟ ವಂಚಕರು

ಬೆಂಗಳೂರು ಉತ್ತರ ತಾಲೂಕಿನ ಬಾಗಲಗುಂಟೆಯ ವಿನೋದ್ (45) ಎಂಬುವರು 80ರ ದಶಕದ ಶೈಲಿಯಲ್ಲಿ ಫೋಟೋ ಎಡಿಟ್ ಮಾಡಲು ನಕಲಿ ಆ್ಯಪ್ …

Leave a Reply

Your email address will not be published. Required fields are marked *