ಉಡುಪಿ: ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದೆ.ಕೊರಂಗ್ರಪಾಡಿಯ ಪೌಲ್ ಡಿಸಿಲ್ವಾ (55) ಮೃತರು. ಮೂರ್ಛೆ ಕಾಯಿಲೆಯಿಂದ ಬಳಲುತ್ತಿದ್ದ ಇವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಡಿ.18ರಂದು ಬೆಳಗ್ಗೆ ಉಪಹಾರ ಮಾಡಿ ಬಹಿರ್ದೆಸೆಗೆಂದು ಹೊರಗೆ ಹೋಗಿ ಬರುತ್ತೇನೆ ಎಂದು ಮನೆಯ ಹೊರಗೆ ಹೋಗಿದ್ದು ಒಂದು ಗಂಟೆಯಾದರೂ ಮನೆಗೆ ಬಂದಿರಲಿಲ್ಲ.ಅವರ ಪತ್ನಿ ಹುಡುಕಿಕೊಂಡು ಹೋದಾಗ ಪಾಪನಾಶಿನಿ ನದಿ ತೀರದಲ್ಲಿ ಕವಚಿ ಬಿದ್ದು ತೇಲುತ್ತಿರುವ ದೇಹ ಕಂಡಿದ್ದು, ನೋಡಿದಾಗ ಪೌಲ್ ಡಿಸಿಲ್ವಾ ಅವರದ್ದಾಗಿತ್ತು. ಮೂರ್ಛೆ ರೋಗ ಅಥವಾ ಬಹಿರ್ದೆಸೆಗೆ ಬಂದಾಗ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

