ಕನಕಪುರ: ಸಾಂಬಾರ್ ಕೇಳುವ ನೆಪದಲ್ಲಿ ವೃದ್ಧೆ ಕಿವಿಯೋಲೆ ಮತ್ತು ಮೂಗು ಬೊಟ್ಟು, ಒಂದು ಸರ, ಎರಡು ಉಂಗುರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಆಲಗಡಕಲು ಗ್ರಾಮದ ಪುಟ್ಟಮ್ಮ ಚಿನ್ನದ ಒಡವೆ ಕಳೆದುಕೊಂಡ ವೃದ್ಧೆ. ಅದೇ ಗ್ರಾಮದ ಕುಮಾರ್ಎಂಬ ವ್ಯಕ್ತಿ ಚಿನ್ನದ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಆರೋಪಿ ಕುಮಾರ್ಪ್ರತಿದಿನ ಸಾಂಬಾರ್ ಕೊಡು ಎಂದು ಚೊಂಬು ಹಿಡಿದುಕೊಂಡು ಪುಟ್ಟಮ್ಮ ಅವರ ಮನೆ ಬಳಿ ಬರುತ್ತಿದ್ದ. ಜ.14ರಂದು ವೃದ್ಧೆ ಪುಟ್ಟಮ್ಮ ಮನೆಯಲ್ಲಿ ಒಬ್ಬಳೇ ಇದ್ದಾಗ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಸಾಂಬಾರ್ ಕೊಡು ಅಜ್ಜಿ ಎಂದು ಮನೆಯೊಳಗೆ ಬಂದು ಆಕೆಯ ಕುತ್ತಿಗೆಗೆ ಕೈ ಹಾಕಿ ಹಿಡಿದು ಉಸಿರುಗಟ್ಟಿಸಿ 2 ಕಿವಿಯೋಲೆ, 2 ಮಾಟಿ, ಮೂಗುಬೊಟ್ಟು, ಚಿನ್ನದ ಸರ, 2 ಉಂಗುರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

