Breaking News

ಬಿಜೆಪಿ ಸಂಪರ್ಕಿಸಿರೋದು ನಿಜ. ನಾನು ಕಟ್ಟಾ ಕಾಂಗ್ರೆಸ್ಸಿಗ, ಪಕ್ಷ ಬಿಡಲ್ಲ- ಕೈ ಶಾಸಕ ಸಿ.ಎಸ್ ಶಿವಳ್ಳಿ

ಬಿಜೆಪಿಯವರು ನನ್ನ ಸಂಪರ್ಕ ಮಾಡಿದ್ದು ನಿಜ. ಆದ್ರೆ‌ ನಾನು ಅದನೆಲ್ಲಾ ತಿರಸ್ಕಾರ ಮಾಡಿದ್ದೇನೆ ಎಂದು ಕುಂದಗೋಳ ಕಾಂಗ್ರೆಸ್ ಶಾಸಕ‌ಸಿ ಎಸ್ ಶಿವಳ್ಳಿ ಹೇಳಿದರು.
ನಗರದಲ್ಲಿಂದು ಮಾಧ್ಯಮ ‌ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು
ಆದ್ರೆ ಅವರು ಒಡ್ಡಿದ್ದ ಆಮೀಷ ಎಲ್ಲವೂ ಬಹಿರಂಗ ಪಡಿಸಲಾಗುವದಿಲ್ಲ.
ನಾನು ಕಾಂಗ್ರೆಸ್ ಪಕ್ಷ ಬಿಡೋದು ದೂರದ ಮಾತು.
ನಾನು ಕಟ್ಟಾ ಕಾಂಗ್ರೆಸ್ಸಿಗ.
ಬಿಜೆಪಿಯವರ ಆಪರೇಷನ್ ಕಮಲ‌ ಅ್ಯಕ್ಟಿವ್ ಇರೋದು ನಿಜ. ಆದ್ರೆ ನಮ್ಮ‌ ಪಕ್ಷದವರು ಯಾರು ಪಕ್ಷ ಬಿಡಲ್ಲ.
ನನ್ನನ್ನ ನನ್ನ ಕ್ಷೇತ್ರದ ಜನ ಕಾಂಗ್ರೆಸ್ ನಿಂದ ಆಯ್ಕೆ ಮಾಡಿದ್ದಾರೆ.ಹೀಗಾಗಿ ನಾನು ಕಾಂಗ್ರೆಸ್ ಪಕ್ಷ ಬಿಡುವದಿಲ್ಲ.
ನನ್ನ ಪ್ರಕಾರ ಸಮ್ಮಿಶ್ರ ಸರ್ಕಾರ ಸೇಫ್ ಆಗಿದೆ. ಒಂದೋಮ್ಮೆ‌ ಸರ್ಕಾರ ಬೀಳಿಸಬೇಕು ಅಂದ್ರೆ 14 ಶಾಸಕರು ರಾಜೀನಾಮೆ ನೀಡಬೇಕು. ರಾಜೀನಾಮೆ ನೀಡಿ ಮತ್ತೆ ಚುನಾವಣೆಯಲ್ಲಿ ಗೆದ್ದು ಬರೋದು ಕಷ್ಟದ ಕೆಲಸ.
ಹೀಗಾಗಿ ಯಾರು ರಾಜೀನಾಮೆ‌ ನೀಡಿ ಬಿಜೆಪಿ ಸೇರಲ್ಲ ಎಂದರು.
Share News

About Shaikh BIG TV NEWS, Hubballi

Check Also

ಗಸ್ತು ಪೊಲೀಸರ ಮೇಲೆ ದಾಳಿ: ಕಾನೂನಿಗೆ ಸವಾಲು ಹಾಕಿದ ದುಷ್ಕರ್ಮಿಗಳು!

ಪೊಲೀಸರೇ ಸುರಕ್ಷಿತ ಅಲ್ಲವಾ..? ಹುಬ್ಬಳ್ಳಿಯಲ್ಲಿ ಗೂಂಡಾಗಿರಿ ಮಿತಿ ಮೀರಿ! ಸ್ಮಶಾನದಲ್ಲೇ ದಾಳಿ: ಪೊಲೀಸರ ಮೇಲೆ ಚಾಕು ನಗರದಲ್ಲಿ ಭೀತಿ! ಕರ್ತವ್ಯದಲ್ಲಿದ್ದ …

Leave a Reply

Your email address will not be published. Required fields are marked *