ಇಲ್ಲಿನ ಸೋಗಾನೆಯ ಕೇಂದ್ರ ಕಾರಾಗೃಹ ಕಟ್ಟಡದ ಒಳಗೆ ಫೆ. 1ರಂದು ಗಾಂಜಾ, ಮೊಬೈಲ್ಫೋನ್, ಸಿಗರೇಟ್ ಹಾಗೂ ಲೈಟರ್ ಒಳಗೊಂಡ ಪ್ಯಾಕೆಟ್ ಎಸೆದಿದ್ದ ಆರೋಪದ ಮೇಲೆ ತುಂಗಾ ನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಪರಿಚಿತರು ಗಮ್ಟೇಪ್ನಿಂದ ಸುತ್ತಿದ್ದ ಪ್ಯಾಕ್ ಎಸೆದಿರುವ ಬಗ್ಗೆ ಕಾರಾಗೃಹದ ಅಧೀಕ್ಷಕ ಎಚ್.ಎ.ಪರಮೇಶ್ ಪೊಲೀಸರಿಗೆ ದೂರು ನೀಡಿದ್ದರು. ಹೀಗಾಗಿ ಸಿಪಿಐ ಕೆ.ಟಿ.ಗುರುರಾಜ್ ನೇತೃತ್ವದ ತಂಡ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿತ್ತು. ಕಾರಾಗೃಹ ಕಟ್ಟಡದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಯ ಮಾಹಿತಿ ಆಧರಿಸಿ ಶಿವಮೊಗ್ಗದ ಸೂಳೆಬೈಲ್ ನಿವಾಸಿ ಮೊಹಮ್ಮದ್ ಖಲಂದರ್ ಅಲಿಯಾಸ್ ಕಲ್ಲು (23), ಬೊಮ್ಮನಕಟ್ಟೆ ನಿವಾಸಿಗಳಾದ ಅಬ್ದುಲ್ ಮುನಾಫ್ ಅಲಿಯಾಸ್ ಮುನ್ನಾ (23) ಪರಶುರಾಮ್ (19) ಹಾಗೂ ಕೋಟೆ ಗಂಗೂರು ನಿವಾಸಿ ವಿಜಯ್ (19) ಎಂಬುವವರನ್ನು ಬಂಧಿಸಲಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news

