Breaking News

ಚಿತ್ರದುರ್ಗ ಜಿಲ್ಲಾಧಿಕಾರಿ ಸಹಿ ನಕಲು: 6 ಮಂದಿ ಬಂಧನ

ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಗಳ ಡಿಜಿಟಲ್‌ ಸಹಿ (ಡಿಎಸ್‌ಸಿ) ನಕಲು ಮಾಡಿ, ಜಿಲ್ಲಾ ಖಜಾನೆಗೆ ₹ 15 ಲಕ್ಷ ಮೌಲ್ಯದ ಬಿಲ್‌ ಸಲ್ಲಿಸಿದ್ದ ನಗರಾಭಿವೃದ್ಧಿ ಕೋಶದ 6 ನೌಕರರನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಸೈಯದ್‌ ಸಾಧಿಕ್‌, ವಿಜಯ್‌ ಕುಮಾರ್‌, ವಿನಯ್‌ ಶರ್ಮಾ, ಬಸವರಾಜ್‌, ಮೆಹಬೂಬ್‌ ಭಾಷಾ, ವೆಂಕಟೇಶ್‌ ಬಂಧಿತರು. ನಗರಾಭಿವೃದ್ಧಿ ಕೋಶದ ನಿರ್ದೇಶಕಿ ರೇಷ್ಮಾ ಹಾನಗಲ್‌ ನೀಡಿನ ದೂರಿನ ಮೇರೆಗೆ ಶುಕ್ರವಾರ 6 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಡಿವೈಎಸ್‌ಪಿ ಅರುಣ ನಾಗೇಗೌಡ ಅವರ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿತ್ತು. ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share News

About BigTv News

Check Also

ಅಕ್ರಮ ಕಲ್ಲು ಸಾಗಾಟದ ವಿರುದ್ಧ ಕಾರ್ಯಾಚರಣೆ: 9 ಲಾರಿಗಳು, ನಾಲ್ಕು ಹಿಟಾಚಿ ಸಹಿತ ಸೊತ್ತುಗಳು ವಶ

ಉಡುಪಿ: ಕಾರ್ಕಳ ತಾಲೂಕಿನಲ್ಲಿ ಅಕ್ರಮ ಕಲ್ಲು ಸಾಗಾಟದ ವಿರುದ್ಧ ಪೊಲೀಸರು ಕಾರ್ಯಾಚರಣೆ ನಡೆಸಿ, ಹಲವರನ್ನು ಬಂಧಿಸಿ ಲಾರಿ, ಟಿಪ್ಪರ್, ಹಿಟಾಚಿ …

Leave a Reply

Your email address will not be published. Required fields are marked *