ರಾಯಚೂರು : ಇತ್ತೀಚಿಗೆ ಹುಬ್ಬಳ್ಳಿಯಲ್ಲಿ ರೀಲ್ಸ್ ಹುಚ್ಚಾಟಕ್ಕೆ ಅಪ್ರಾಪ್ತ ಬಾಲಕನೊಬ್ಬ ಬಲಿಯಾಗಿದ್ದ ಘಟನೆ ನಡೆದಿತ್ತು. ಆ ಘಟನೆ ಮಾಸುವ ಮುನ್ನವೇ ಇದೀಗ ರಾಯಚೂರಿನಲ್ಲಿ ಮತ್ತೊಂದು ಘಟನೆ ನಡೆದಿದ್ದು ರಿಲ್ಸ್ ಹುಚ್ಚಾಟಕ್ಕೆ ಯುವಕನೊಬ್ಬ ಬಲಿಯಾಗಿದ್ದಾನೆ. ಈಜು ಬಾರದೆ ರಿಲೀಸ್ ಮಾಡಲು ಹೋಗಿ ತುಂಗಭದ್ರಾ ನದಿಯಲ್ಲಿ ಮುಳುಗಿ 22 ವರ್ಷದ ಅಮನ್ ಖಾನ್ ಎಂಬ ಯುವಕ ಮೃತಪಟ್ಟಿದ್ದಾನೆ. ಸಿಂಧನೂರು ಪಟ್ಟಣದ ಗಂಗಾ ನಗರ ನಿವಾಸಿಯಾಗಿದ್ದ ಅಮನ್ ಖಾನ್ ಗೆಳೆಯರ ಜೊತೆಗೆ ತುಂಗಭದ್ರನದಲ್ಲಿ ಸ್ನಾನಕ್ಕೆ ತೆರಳಿದ್ದ. ನದಿಯಲ್ಲಿ ಸ್ನಾನ ಮಾಡುತ್ತ ರಿಲೀಸ್ ಮಾಡುತ್ತಿದ್ದ ಉಳಿದ ಗೆಳೆಯರು ಮೊಬೈಲಲ್ಲಿ ಚಿತ್ರೀಕರಣ ಮಾಡುತ್ತಿದ್ದರು. ಈಜು ಬಾರದ ಹಿನ್ನೆಲೆಯಲ್ಲಿ ಅಮ್ಮನ್ ಖಾನ್ ನದಿಯಲ್ಲಿ ಮುಳುಗಿದ್ದಾನೆ. ಸ್ಥಳೀಯರು ಮಿನುಗಾಗರು ಹೊರಗಡೆ ಎಳೆಯಲು ಪ್ರಯತ್ನ ನಡೆಸಿದರು ಪ್ರಯೋಜನವಾಗಿಲ್ಲ ಮೇಲೆ ತಂದಾಗ ಅಮನ್ ಖಾನ್ ಮೃತಪಟ್ಟಿದ್ದ.
bigtvnews | Hubli Dharwad News | Kannada News | Karnataka News Hubli News | News In Hubli | Local news

